ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕ ಯಾವಾಗ ಬರಲಿದೆ‌‌: ಸಿ.ಟಿ.ರವಿಗೆ ವಿದ್ಯಾರ್ಥಿನಿಯರ ಪ್ರಶ್ನೆ

Last Updated 7 ಜೂನ್ 2022, 14:58 IST
ಅಕ್ಷರ ಗಾತ್ರ

ಹಾಸನ: ಬೇಲೂರು ರಣಘಟ್ಟ ಯೋಜನೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಬಂದಿದ್ದ ಸಿ.ಟಿ ರವಿ ಅವರನ್ನು ಭೇಟಿ ಮಾಡಿದ ವಿದ್ಯಾರ್ಥಿನಿಯರು, 'ಶಾಲೆ ಪ್ರಾರಂಭವಾಗಿ ಒಂದು ತಿಂಗಳಾದರೂ ಪಠ್ಯ ಪುಸ್ತಕ ನೀಡಿಲ್ಲ' ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ ಘಟನೆ ನಡೆಯಿತು.

ಕಾಮಗಾರಿ ನಡೆಯುತ್ತಿರುವ ಸ್ವಲ್ಪ ದೂರದಲ್ಲಿ ಚಿಲ್ಕೂರು ಗೇಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಶಾಲೆ ಮುಗಿಸಿ ಹಿಂದಿರುಗುತ್ತಿದ್ದ ಇಬ್ಬೀಡು ಶ್ರೀ ಶಿವನಂಜುಂಡೇಶ್ವರ ಶಾಲಾ 10 ನೇ ತರಗತಿ ವಿದ್ಯಾರ್ಥಿಗಳು ರವಿ ಅವರನ್ನು ಕಂಡು ಮಾತನಾಡಿದರು. "ಶಾಲೆ ಪ್ರಾರಂಭವಾಗಿ 1 ತಿಂಗಳಾದರೂ ಸಮಾಜ ವಿಜ್ಞಾನ ಮತ್ತು ಕನ್ನಡ ಪುಸ್ತಕ ಬಂದಿಲ್ಲ. ಹೀಗೆ ಆದರೆ ನಮಗೆ ಪರೀಕ್ಷೆ ಬರೆಯೋದಕ್ಕೆ ಕಷ್ಟ ಆಗುತ್ತೆ' ಎಂದರು.

'ನೀವು ಬುದ್ಧಿವಂತರಿದ್ದೀರಿ, ಪರೀಕ್ಷೆಯಲ್ಲಿ ಪಾಸ್ ಆಗ್ತೀರಿ ಬಿಡಿ, ಪಠ್ಯ ಪುಸ್ತಕ ಆದಷ್ಟು ಶೀಘ್ರವಾಗಿ ಬರಲಿದೆ' ಎಂದು ಹೇಳಿ ರವಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT