<p><strong>ಸಕಲೇಶಪುರ</strong> (ಹಾಸನ ಜಿಲ್ಲೆ): ಇಲ್ಲಿನ ಸಕಲೇಶಪುರ–ಮಾರನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದ ವೇಳೆ ಪರ್ಯಾಯ ಮಾರ್ಗವಾಗಿ ಬಳಸಲಾಗುತ್ತಿದ್ದ, ಹಾರ್ಲೆ–ನಡಹಳ್ಳಿ ನಡುವಿನ ಮುಖ್ಯ ರಸ್ತೆಯೂ ಸೇರಿದಂತೆ ಗುಡ್ಡದ ಭಾಗ ಕುಸಿದು 30 ಗ್ರಾಮಗಳ ಸಂಪರ್ಕ ಕಡಿತವಾಗಿದೆ.</p><p>ಕುಂಬರಡಿ, ನಡಹಳ್ಳಿ, ದೇಖಲ, ಮಲ್ಲಾಗದ್ದೆ, ಕಾಡಮನೆ ಸೇರಿದಂತೆ 30 ಗ್ರಾಮಗಳು, 40ಕ್ಕೂ ಹೆಚ್ಚು ಹ್ಯಾಮ್ಲೆಟ್ ಗ್ರಾಮಗಳಿಂದ ಹಾರ್ಲೆ ಎಸ್ಟೇಟ್, ಹಾರ್ಲೆ ಕೂಡಿಗೆ ಮಾರ್ಗವಾಗಿ ಸಕಲೇಶಪುರ, ಮೂಡಿಗೆರೆಗೆ ಇದ್ದ ಏಕೈಕ ಸಂಪರ್ಕ ರಸ್ತೆ ಇದು.</p><p>ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದ ಸುಮಾರು 200 ಅಡಿ ಉದ್ದ ರಸ್ತೆ ಹಾಗೂ ಒಂದೂವರೆ ಎಕರೆ ಕಾಫಿ ತೋಟ, 300 ಅಡಿಗೂ ಹೆಚ್ಚು ದೂರದ ತೆಗ್ಗು ಪ್ರದೇಶಕ್ಕೆ ಕೊಚ್ಚಿ ಹೋಗಿದೆ. ಪುನರ್ ನಿರ್ಮಾಣ ಅಸಾಧ್ಯವೆನ್ನಿಸುವ ರೀತಿಯಲ್ಲಿ ರಸ್ತೆಯು ಆಳಕ್ಕೆ ಕುಸಿದಿದೆ.</p><p>‘ಈ ಪ್ರದೇಶದಲ್ಲಿ ವಾರ್ಷಿಕ 600 ಸೆ.ಮೀ.ಗೂ ಹೆಚ್ಚು ಮಳೆ ಸುರಿಯುತ್ತಿತ್ತು. ಆದರೂ ಭೂಕುಸಿತವಾಗಿರಲಿಲ್ಲ. ಹಾರ್ಲೆಯಲ್ಲಿ ರಸ್ತೆ ಹಾಗೂ ಕಾಫಿ ತೋಟ ಕುಸಿಯಲು ಅವೈಜ್ಞಾನಿಕ ಕಾಮಗಾರಿಯೇ ಕಾರಣ’ ಎಂದು ಕೆಲವು ದಿನಗಳ ಹಿಂದೆ ಸ್ಥಳ ಪರಿಶೀಲಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಷಾದಿಸಿದ್ದರು.</p><p>‘ಎತ್ತಿನಹಳ್ಳದ ಸೇತುವೆ ಪಕ್ಕದಲ್ಲಿ ಅಳವಡಿಸಿರುವ ಪೈಪ್ಲೈನ್ ಉದ್ದಕ್ಕೂ ರಸ್ತೆಯ ಕೆಳಭಾಗದ ಮಣ್ಣು ಕೊಚ್ಚಿ ಹೋಗಿದೆ. ಈ ರಸ್ತೆಯೂ ಶೀಘ್ರ ಕುಸಿದು, ವಾಹನ ಸಂಚಾರ ಬಂದ್ ಆಗಲಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.</p><p>‘ಪೈಪ್ ಆಳಕ್ಕೆ ಅಳವಡಿಸಿಲ್ಲ. ಗಟ್ಟಿಯಾಗಿ ಮಣ್ಣು ಹಾಕಿಲ್ಲ. ಪ್ರಾಯೋಗಿಕವಾಗಿ ಹರಿಸಿದ ನೀರಿನ ರಭಸಕ್ಕೆ ಭೂಮಿ ಸಡಿಲಗೊಂಡಿತ್ತು. ಈ ಹಿಂದೆ ರಸ್ತೆಯುದ್ದಕ್ಕೂ ನಿರ್ಮಿಸಿದ್ದ ಚರಂಡಿ ಹಾಗೂ ಮೋರಿಗಳು ಈಗ ಇಲ್ಲ. ಮಳೆ ನೀರಿನ ರಭಸಕ್ಕೆ ಸಡಿಲು ಮಣ್ಣು ಕುಸಿಯುತ್ತಿದೆ’ ಎನ್ನುತ್ತಾರೆ.</p><p>‘ರಸ್ತೆ ಕುಸಿದಿದ್ದರಿಂದ ಸಕಲೇಶಪುರ, ಹಾನುಬಾಳಿನ ಶಾಲೆಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ರಸ್ತೆಯನ್ನು ಮತ್ತೆ ನಿರ್ಮಿಸುತ್ತಾರೆಂಬ ಭರವಸೆಯೂ ಇಲ್ಲ’ ಎಂಬುದು ಅವರ ಆತಂಕ.</p>.<blockquote>‘ನಡುಗುವ ಭೂಮಿ’ </blockquote>.<p>‘ಈ ರಸ್ತೆಯ ಪಕ್ಕದ ಲ್ಲಿಯೇ, 10 ಅಡಿ ಸುತ್ತಳತೆಯ ಭಾರಿ ಗಾತ್ರದ ಕಬ್ಬಿಣದ ಪೈಪ್ಗಳನ್ನು, 20 ಅಡಿ ಆಳ, 15 ಅಡಿ ಅಗಲಕ್ಕೆ ಭೂಮಿಯನ್ನು ಸೀಳಿಕೊಂಡು ಅಳವಡಿಸಲಾಗಿದೆ. ಅದರಿಂದ ರಸ್ತೆಯ ಪಕ್ಕದಲ್ಲಿ ಭೂಮಿ ಸಂಪೂರ್ಣ ಸಡಿಲಗೊಂಡಿದೆ. ಆ ಪೈಪ್ ಮೂಲಕ ಇತ್ತೀಚೆಗೆ 2 ಸಾವಿರ ಎಚ್ಪಿ ಪಂಪ್ನಿಂದ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಪೈಪ್ಲೈನ್ ಹಾದು ಹೋಗಿರುವ ಅಕ್ಕ ಪಕ್ಕ ಭೂಮಿ ನಡುಗುತ್ತಿದ್ದ ಅನುಭವ ನಮಗೆಲ್ಲ ಆಗಿದೆ’ ಎಂದು ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಬಿ. ಲಕ್ಷ್ಮಣ್ ‘ಪ್ರಜಾವಾಣಿ’ ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong> (ಹಾಸನ ಜಿಲ್ಲೆ): ಇಲ್ಲಿನ ಸಕಲೇಶಪುರ–ಮಾರನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದ ವೇಳೆ ಪರ್ಯಾಯ ಮಾರ್ಗವಾಗಿ ಬಳಸಲಾಗುತ್ತಿದ್ದ, ಹಾರ್ಲೆ–ನಡಹಳ್ಳಿ ನಡುವಿನ ಮುಖ್ಯ ರಸ್ತೆಯೂ ಸೇರಿದಂತೆ ಗುಡ್ಡದ ಭಾಗ ಕುಸಿದು 30 ಗ್ರಾಮಗಳ ಸಂಪರ್ಕ ಕಡಿತವಾಗಿದೆ.</p><p>ಕುಂಬರಡಿ, ನಡಹಳ್ಳಿ, ದೇಖಲ, ಮಲ್ಲಾಗದ್ದೆ, ಕಾಡಮನೆ ಸೇರಿದಂತೆ 30 ಗ್ರಾಮಗಳು, 40ಕ್ಕೂ ಹೆಚ್ಚು ಹ್ಯಾಮ್ಲೆಟ್ ಗ್ರಾಮಗಳಿಂದ ಹಾರ್ಲೆ ಎಸ್ಟೇಟ್, ಹಾರ್ಲೆ ಕೂಡಿಗೆ ಮಾರ್ಗವಾಗಿ ಸಕಲೇಶಪುರ, ಮೂಡಿಗೆರೆಗೆ ಇದ್ದ ಏಕೈಕ ಸಂಪರ್ಕ ರಸ್ತೆ ಇದು.</p><p>ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದ ಸುಮಾರು 200 ಅಡಿ ಉದ್ದ ರಸ್ತೆ ಹಾಗೂ ಒಂದೂವರೆ ಎಕರೆ ಕಾಫಿ ತೋಟ, 300 ಅಡಿಗೂ ಹೆಚ್ಚು ದೂರದ ತೆಗ್ಗು ಪ್ರದೇಶಕ್ಕೆ ಕೊಚ್ಚಿ ಹೋಗಿದೆ. ಪುನರ್ ನಿರ್ಮಾಣ ಅಸಾಧ್ಯವೆನ್ನಿಸುವ ರೀತಿಯಲ್ಲಿ ರಸ್ತೆಯು ಆಳಕ್ಕೆ ಕುಸಿದಿದೆ.</p><p>‘ಈ ಪ್ರದೇಶದಲ್ಲಿ ವಾರ್ಷಿಕ 600 ಸೆ.ಮೀ.ಗೂ ಹೆಚ್ಚು ಮಳೆ ಸುರಿಯುತ್ತಿತ್ತು. ಆದರೂ ಭೂಕುಸಿತವಾಗಿರಲಿಲ್ಲ. ಹಾರ್ಲೆಯಲ್ಲಿ ರಸ್ತೆ ಹಾಗೂ ಕಾಫಿ ತೋಟ ಕುಸಿಯಲು ಅವೈಜ್ಞಾನಿಕ ಕಾಮಗಾರಿಯೇ ಕಾರಣ’ ಎಂದು ಕೆಲವು ದಿನಗಳ ಹಿಂದೆ ಸ್ಥಳ ಪರಿಶೀಲಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಷಾದಿಸಿದ್ದರು.</p><p>‘ಎತ್ತಿನಹಳ್ಳದ ಸೇತುವೆ ಪಕ್ಕದಲ್ಲಿ ಅಳವಡಿಸಿರುವ ಪೈಪ್ಲೈನ್ ಉದ್ದಕ್ಕೂ ರಸ್ತೆಯ ಕೆಳಭಾಗದ ಮಣ್ಣು ಕೊಚ್ಚಿ ಹೋಗಿದೆ. ಈ ರಸ್ತೆಯೂ ಶೀಘ್ರ ಕುಸಿದು, ವಾಹನ ಸಂಚಾರ ಬಂದ್ ಆಗಲಿದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.</p><p>‘ಪೈಪ್ ಆಳಕ್ಕೆ ಅಳವಡಿಸಿಲ್ಲ. ಗಟ್ಟಿಯಾಗಿ ಮಣ್ಣು ಹಾಕಿಲ್ಲ. ಪ್ರಾಯೋಗಿಕವಾಗಿ ಹರಿಸಿದ ನೀರಿನ ರಭಸಕ್ಕೆ ಭೂಮಿ ಸಡಿಲಗೊಂಡಿತ್ತು. ಈ ಹಿಂದೆ ರಸ್ತೆಯುದ್ದಕ್ಕೂ ನಿರ್ಮಿಸಿದ್ದ ಚರಂಡಿ ಹಾಗೂ ಮೋರಿಗಳು ಈಗ ಇಲ್ಲ. ಮಳೆ ನೀರಿನ ರಭಸಕ್ಕೆ ಸಡಿಲು ಮಣ್ಣು ಕುಸಿಯುತ್ತಿದೆ’ ಎನ್ನುತ್ತಾರೆ.</p><p>‘ರಸ್ತೆ ಕುಸಿದಿದ್ದರಿಂದ ಸಕಲೇಶಪುರ, ಹಾನುಬಾಳಿನ ಶಾಲೆಗಳಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ರಸ್ತೆಯನ್ನು ಮತ್ತೆ ನಿರ್ಮಿಸುತ್ತಾರೆಂಬ ಭರವಸೆಯೂ ಇಲ್ಲ’ ಎಂಬುದು ಅವರ ಆತಂಕ.</p>.<blockquote>‘ನಡುಗುವ ಭೂಮಿ’ </blockquote>.<p>‘ಈ ರಸ್ತೆಯ ಪಕ್ಕದ ಲ್ಲಿಯೇ, 10 ಅಡಿ ಸುತ್ತಳತೆಯ ಭಾರಿ ಗಾತ್ರದ ಕಬ್ಬಿಣದ ಪೈಪ್ಗಳನ್ನು, 20 ಅಡಿ ಆಳ, 15 ಅಡಿ ಅಗಲಕ್ಕೆ ಭೂಮಿಯನ್ನು ಸೀಳಿಕೊಂಡು ಅಳವಡಿಸಲಾಗಿದೆ. ಅದರಿಂದ ರಸ್ತೆಯ ಪಕ್ಕದಲ್ಲಿ ಭೂಮಿ ಸಂಪೂರ್ಣ ಸಡಿಲಗೊಂಡಿದೆ. ಆ ಪೈಪ್ ಮೂಲಕ ಇತ್ತೀಚೆಗೆ 2 ಸಾವಿರ ಎಚ್ಪಿ ಪಂಪ್ನಿಂದ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಪೈಪ್ಲೈನ್ ಹಾದು ಹೋಗಿರುವ ಅಕ್ಕ ಪಕ್ಕ ಭೂಮಿ ನಡುಗುತ್ತಿದ್ದ ಅನುಭವ ನಮಗೆಲ್ಲ ಆಗಿದೆ’ ಎಂದು ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಬಿ. ಲಕ್ಷ್ಮಣ್ ‘ಪ್ರಜಾವಾಣಿ’ ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>