ಸುಮಾರು 10 ವರ್ಷಗಳಿಂದ ದೇವಾಲಯದ ಅಭಿವೃದ್ಧಿ ಸ್ಥಗಿತಗೊಂಡು ಪಾಳು ಬಿದ್ದಿದೆ. ಹಾಸನಾಂಬದೇವಸ್ಥಾನ ‘ಎ’ ಶ್ರೇಣಿ ಪಡೆದಿರುವುದರಿಂದ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ‘ಬಿ’ ಗ್ರೇಡ್ದೇವಸ್ಥಾನಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಹಾಸನಾಂಬದೇಗುಲದ ಖಾತೆಯಿಂದ ₹50 ಲಕ್ಷ ವಿನಿಯೋಗಿಸಲಾಗುವುದು. ರಾಜ್ಯ ಖನಿಜ ನಿಗಮದ ಅಧ್ಯಕಲಿಂಗಮೂರ್ತಿ ಅವರು ಸಿಎಸ್ಆರ್ ನಿಧಿಯಿಂದ ₹ 25 ಲಕ್ಷ ನೀಡಲು ಒಪ್ಪಿದ್ದಾರೆ. ಒಟ್ಟು 75 ಲಕ್ಷ ಹಾಗೂದಾನಿಗಳ ಸಹಕಾರ ಪಡೆದು ದೇವಾಲಯ ಅಭಿವೃದ್ಧಿ ಪಡಿಸಲಾಗುವುದು ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್, ತಹಶೀಲ್ದಾರ್ ಶಿವಶಂಕರಪ್ಪ ಜತೆ ಚರ್ಚಿಸಲಾಗಿದ್ದು, ಪ್ರಸಕ್ತ ವರ್ಷವೇ ನಿರ್ಮಿತಿಕೇಂದ್ರದ ವತಿಯಿಂದ ಕಾಮಗಾರಿ ಕೈಗೆತ್ತಿಗೊಳ್ಳಲಾಗುವುದು. ಜೀರ್ಣೋದ್ಧಾರಕ್ಕೆ ಹಣದ ಕೊರತೆ ಇಲ್ಲ ಎಂದುಸ್ಪಷ್ಟಪಡಿಸಿದರು.