ಸಂಜೆ ಶಾಲೆ ಬಿಟ್ಟ ಸಮಯದಲ್ಲಿ ಜೋರು ಮಳೆ ಬಂದ್ದರಿಂದ, ವಿದ್ಯಾರ್ಥಿಗಳು ನೆನೆದು ಮನೆಗೆ ಹೋಗಬೇಕಾಯಿತು. ಹಿರೀಸಾವೆ ಅಂಬೇಡ್ಕರ್ ವೃತ್ತದಿಂದ ಮೇಟಿಕೆರೆ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶ್ರವಣಬೆಳಗೊಳ ರಸ್ತೆಗೆ ಅಂಡರ್ ಪಾಸ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದರಿಂದ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ, ಮಳೆ ನೀರು, ಸರ್ವಿಸ್ ರಸ್ತೆಯಲ್ಲಿ ಹರಿದು, ದಿಡಗ ಅಂಡರ್ ಪಾಸ್ ಬಳಿ 3 ರಿಂದ 4 ಅಡಿ ನೀರು ರಸ್ತೆಯಲ್ಲಿ ನಿಂತು, ರಸ್ತೆ ಕಾಣದಾಗಿತ್ತು. ನೀರಿನಲ್ಲಿಯೇ ಹಾಸನ–ಬೆಂಗಳೂರು, ಬೆಂಗಳೂರು–ಹಾಸನ ಕಡೆಗೆ ವಾಹನಗಳು ಸಂಚರಿಸಿದವು.