ಆಲೂರು ತಾಲ್ಲೂಕಿನಲ್ಲಿ ಭತ್ತದ ಗದ್ದೆಗಳಿಗೆ ಕಾಡಾನೆಗಳು ನುಗ್ಗಿದ್ದರಿಂದ ಬೆಳೆ ಹಾಳಾಗಿದೆ.
ನಾಲ್ಕು ಎಕರೆ ಗದ್ದೆಯಲ್ಲಿ ಭತ್ತ ಬಿತ್ತಿದೆ. ಚೆನ್ನಾಗಿ ಹುಟ್ಟಿತ್ತು. ವಾರದಿಂದ ಕಾಡಾನೆಗಳು ತುಳಿದು ನಾಶ ಮಾಡಿವೆ. ತಿನ್ನುವ ಅನ್ನದ ಜೊತೆಗೆ ಜೀವನ ಮಣ್ಣು ಪಾಲಾಯಿತು. ನಮಗೆ ಪರಿಹಾರ ಬೇಡ. ಕಾಡಾನೆಗಳನ್ನು ಸ್ಥಳಾಂತರಿಸಬೇಕು
ಜಾನ್ಸಿಲ್ ಕ್ರಾಸ್ತ ಬಿಳುಗವಳ್ಳಿ ಮಾಜಿ ಸೈನಿಕ
ಭುವನೇಶ್ವರಿ ಕಾಡಾನೆಗಳ ಗುಂಪು ಬಿಳಗವಳ್ಳಿ ಬಳಿ ಬೀಡು ಬಿಟ್ಟಿವೆ. ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಭೀತರಾಗಿ ನಿತ್ಯ ಬದುಕಿಗೆ ತೊಂದರೆಯಾಗಿದೆ. ಕಾರ್ಮಿಕರಿಗೆ ಸರ್ಕಾರ ನೆರವು ನೀಡಬೇಕು
ಮಂಜುನಾಥ್ ಕಾಮತಿಯ ಸಾಮಾಜಿಕ ಹೋರಾಟಗಾರ
3–4 ವರ್ಷಗಳಿಂದ ಭತ್ತ ಶುಂಠಿ ಇತರೆ ಬೆಳೆಗಳು ಕಾಡಾನೆಗಳ ಹಾವಳಿಗೆ ಸಿಲುಕಿ ನಷ್ಟ ಅನುಭವಿಸುತ್ತಿದ್ದೇವೆ. ಅರಣ್ಯ ಇಲಾಖೆ ಕೊಡುವ ಪರಿಹಾರ ಒಂದು ದಿನದ ಊಟಕ್ಕೆ ಸಾಲುವುದಿಲ್ಲ. ಕಾಡಾನೆ ಸ್ಥಳಾಂತರಿಸದಿದ್ದರೆ ಹೋರಾಟ ಅನಿವಾರ್ಯ
ಸೀನ ಬಿಳುಗವಳ್ಳಿ ರೈತ
ಕಾಡಾನೆಗಳು ಯಾವ ಸಂದರ್ಭದಲ್ಲಿ ಮನುಷ್ಯರ ಮೇಲೆ ಎರಗುತ್ತವೆ ಎಂಬುದು ತಿಳಿಯುತ್ತಿಲ್ಲ. ಒಂದೆಡೆ ತೋಟದ ಕೆಲಸವಾಗುತ್ತಿಲ್ಲ. ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲ ಆನೆಗಳ ಸ್ಥಳಾಂತರ ಬಿಟ್ಟರೆ ಅನ್ಯ ಮಾರ್ಗವಿಲ್ಲ