<p><strong>ಕೊಣನೂರು:</strong> ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆ ತಂಬಾಕು ಹರಾಜು ಮಾರುಕಟ್ಟೆಯು ಗುರುವಾರದಿಂದ ಮತ್ತೆ ಆರಂಭವಾಗಲಿದೆ.</p>.<p> ರಾಮನಾಥಪುರದಲ್ಲಿರುವ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಖರೀದಿ ಪ್ರಕ್ರಿಯೆಯನ್ನು ಜ.23 ರಿಂದ ನಿಲ್ಲಿಸಿದ್ದರಿಂದ ಬೆಳೆಗಾರರು ಆತಂಕಗೊಂಡಿದ್ದರು. ಫೆ. 5ರಿಂದ ಮತ್ತೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದೆ.</p>.<p>ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ಸೊಪ್ಪನ್ನು ದಾಸ್ತಾನು ಇರಿಸಿದ್ದು , ಶೇ 50 ರಷ್ಟು ತಂಬಾಕು ಮಾರಾಟವಾಗದೆ ಉಳಿದಿದ್ದು, ತಂಬಾಕಿನ ಮೇಲೆ ವಿಧಿಸಿದ್ದ ಹೆಚ್ಚಿನ ಜಿಎಸ್ಟಿ ಖರೀದಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಈ ಕುರಿತಂತೆ ತಂಬಾಕು ಬೆಳೆಗಾರರ ಸಂಘವು ಸಭೆ ನಡೆಸಿದ್ದು, ಶಾಸಕ ಎ. ಮಂಜು ಐಟಿಸಿ ಕಂಪೆನಿಯ ಲೀಫ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ ಜತೆ ಸಭೆ ನಡೆಸಿ, ‘ತಂಬಾಕಿಗೆ ಉತ್ತಮ ಬೆಲೆ ನೀಡುವುದರೊಂದಿಗೆ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು’ ಎಂದಿದ್ದರು.</p>.<p>2025 ನೇ ಸಾಲಿನಲ್ಲಿ ಅ.8 ರಿಂದ ಜ.23 ರ ವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಫ್ಲಾಟ್ ಫಾರಂ 7 ರಲ್ಲಿ 3.8ದಶಲಕ್ಷ ಕೆ.ಜಿ ತಂಬಾಕು ಮಾರಾಟವಾಗಿದ್ದು, ಫ್ಲಾಟ್ ಫಾರಂ 63 ರಲ್ಲಿ 3.2 ದಶಲಕ್ಷ ಕೆ.ಜಿ ಮಾರಾಟವಾಗಿದೆ. ಗರಿಷ್ಠ ಬೆಲೆ ಪ್ರತಿ ಕೆಜಿ ಗೆ ₹320 ಮತ್ತು ಕನಿಷ್ಠ ಬೆಲೆ ಪ್ರತಿ ಕೆಜಿ ಗೆ ₹220 ದೊರೆತಿದೆ. ಮಂಡಳಿಯ ಆದೇಶದಂತೆಗುರುವಾರ ಮಾರುಕಟ್ಟೆಯನ್ನು ಪುನರಾರಂಭಿಸುತ್ತಿದ್ದು ಬೆಳೆಗಾರರಿಗೆ ಮಾಹಿತಿ ನೀಡಿದ್ದೇವೆ ಎಂದು ತಂಬಾಕು ಮಂಡಳಿ ರಾಮನಾಥಪುರ ಮಾರುಕಟ್ಟೆ ಅಧೀಕ್ಷಕಿ ಸವಿತಾ ತಿಳಿಸಿದರು.</p>.<div><blockquote>ಹರಾಜು ಪ್ರಕ್ರಿಯೆ ನಿಲ್ಲಿಸಿದ್ದು ಬೆಳೆಗಾರರಲ್ಲಿ ಅನುಮಾನ ಮೂಡಿಸಿತ್ತು. ಬಿಸಿಲಿನ ಬೇಗೆಯಲ್ಲಿ ಹೊಗೆಸೊಪ್ಪಿನ ಗುಣಮಟ್ಟ ಕಾಪಾಡಿಕೊಳ್ಳುವುದು ಬೇಲ್ ಮಾಡುವುದು ಕಷ್ಟದ ಕೆಲಸವಾಗಿತ್ತು.</blockquote><span class="attribution">ಸೀಬಳ್ಳಿ ಯೋಗಣ್ಣ ರೈತ ಸಂಘ ಘಟಕದ ಅಧ್ಯಕ್ಷ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು:</strong> ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆ ತಂಬಾಕು ಹರಾಜು ಮಾರುಕಟ್ಟೆಯು ಗುರುವಾರದಿಂದ ಮತ್ತೆ ಆರಂಭವಾಗಲಿದೆ.</p>.<p> ರಾಮನಾಥಪುರದಲ್ಲಿರುವ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಖರೀದಿ ಪ್ರಕ್ರಿಯೆಯನ್ನು ಜ.23 ರಿಂದ ನಿಲ್ಲಿಸಿದ್ದರಿಂದ ಬೆಳೆಗಾರರು ಆತಂಕಗೊಂಡಿದ್ದರು. ಫೆ. 5ರಿಂದ ಮತ್ತೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದೆ.</p>.<p>ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ಸೊಪ್ಪನ್ನು ದಾಸ್ತಾನು ಇರಿಸಿದ್ದು , ಶೇ 50 ರಷ್ಟು ತಂಬಾಕು ಮಾರಾಟವಾಗದೆ ಉಳಿದಿದ್ದು, ತಂಬಾಕಿನ ಮೇಲೆ ವಿಧಿಸಿದ್ದ ಹೆಚ್ಚಿನ ಜಿಎಸ್ಟಿ ಖರೀದಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಈ ಕುರಿತಂತೆ ತಂಬಾಕು ಬೆಳೆಗಾರರ ಸಂಘವು ಸಭೆ ನಡೆಸಿದ್ದು, ಶಾಸಕ ಎ. ಮಂಜು ಐಟಿಸಿ ಕಂಪೆನಿಯ ಲೀಫ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ ಜತೆ ಸಭೆ ನಡೆಸಿ, ‘ತಂಬಾಕಿಗೆ ಉತ್ತಮ ಬೆಲೆ ನೀಡುವುದರೊಂದಿಗೆ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು’ ಎಂದಿದ್ದರು.</p>.<p>2025 ನೇ ಸಾಲಿನಲ್ಲಿ ಅ.8 ರಿಂದ ಜ.23 ರ ವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಫ್ಲಾಟ್ ಫಾರಂ 7 ರಲ್ಲಿ 3.8ದಶಲಕ್ಷ ಕೆ.ಜಿ ತಂಬಾಕು ಮಾರಾಟವಾಗಿದ್ದು, ಫ್ಲಾಟ್ ಫಾರಂ 63 ರಲ್ಲಿ 3.2 ದಶಲಕ್ಷ ಕೆ.ಜಿ ಮಾರಾಟವಾಗಿದೆ. ಗರಿಷ್ಠ ಬೆಲೆ ಪ್ರತಿ ಕೆಜಿ ಗೆ ₹320 ಮತ್ತು ಕನಿಷ್ಠ ಬೆಲೆ ಪ್ರತಿ ಕೆಜಿ ಗೆ ₹220 ದೊರೆತಿದೆ. ಮಂಡಳಿಯ ಆದೇಶದಂತೆಗುರುವಾರ ಮಾರುಕಟ್ಟೆಯನ್ನು ಪುನರಾರಂಭಿಸುತ್ತಿದ್ದು ಬೆಳೆಗಾರರಿಗೆ ಮಾಹಿತಿ ನೀಡಿದ್ದೇವೆ ಎಂದು ತಂಬಾಕು ಮಂಡಳಿ ರಾಮನಾಥಪುರ ಮಾರುಕಟ್ಟೆ ಅಧೀಕ್ಷಕಿ ಸವಿತಾ ತಿಳಿಸಿದರು.</p>.<div><blockquote>ಹರಾಜು ಪ್ರಕ್ರಿಯೆ ನಿಲ್ಲಿಸಿದ್ದು ಬೆಳೆಗಾರರಲ್ಲಿ ಅನುಮಾನ ಮೂಡಿಸಿತ್ತು. ಬಿಸಿಲಿನ ಬೇಗೆಯಲ್ಲಿ ಹೊಗೆಸೊಪ್ಪಿನ ಗುಣಮಟ್ಟ ಕಾಪಾಡಿಕೊಳ್ಳುವುದು ಬೇಲ್ ಮಾಡುವುದು ಕಷ್ಟದ ಕೆಲಸವಾಗಿತ್ತು.</blockquote><span class="attribution">ಸೀಬಳ್ಳಿ ಯೋಗಣ್ಣ ರೈತ ಸಂಘ ಘಟಕದ ಅಧ್ಯಕ್ಷ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>