ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ಹಾಸನ | ಹೊಗೆಸೊಪ್ಪು ದರ ಇಳಿಕೆ: ರೈತರಿಗೆ ನಷ್ಟದ ಆತಂಕ

Published : 22 ಫೆಬ್ರುವರಿ 2026, 23:45 IST
Last Updated : 22 ಫೆಬ್ರುವರಿ 2026, 23:45 IST
ಫಾಲೋ ಮಾಡಿ
Comments
ನೇತ್ರಪಾಲ್ ಗುಡ್ಡೇನಹಳ್ಳಿ
ನೇತ್ರಪಾಲ್ ಗುಡ್ಡೇನಹಳ್ಳಿ
ತಂಬಾಕು ಬೆಳೆಗಾರರ ಬೇಡಿಕೆಗೆ ಕೊಳ್ಳುವ ಕಂಪನಿಗಳು ಸ್ಪಂದಿಸುತ್ತಿಲ್ಲ. ತೆರಿಗೆ ಸಬೂಬು ಹೇಳಿಕೊಂಡು ಏಕಾಏಕಿ ಬೆಲೆ ಇಳಿಕೆ ಮಾಡಿದ್ದಾರೆ. ಪ್ರತಿ ಬೆಳೆಗಾರರಿಗೂ ಸಾವಿರಾರು ರೂಪಾಯಿ ನಷ್ಟವಾಗುತ್ತಿದೆ.
ನೇತ್ರಪಾಲ್ ಗುಡ್ಡೇನಹಳ್ಳಿ ಅಖಿಲ ಭಾರತೀಯ ರೈತ ಸಂಘಟನೆಯ ಸದಸ್ಯ
ಈರೇಗೌಡ ನಿಲುವಾಗಿಲು
ಈರೇಗೌಡ ನಿಲುವಾಗಿಲು
ಪ್ರಾರಂಭದಲ್ಲಿ ಸರಾಸರಿ ಬೆಲೆ ₹290 ಸಿಗುತ್ತಿತ್ತು. ತೆರಿಗೆ ನೆಪ ಹೇಳಿ ಮಾರಾಟ ಸ್ಥಗಿತಗೊಳಿಸಿದ್ದು ಈಗ ಎಲ್ಲ ಕಂಪನಿ ವರ್ತಕರು ಬಂದಿದ್ದರೂ ತಂಬಾಕಿನ ಬೆಲೆ ಇಳಿಮುಖವಾಗುತ್ತಿದೆ.
ಈರೇಗೌಡ ನಿಲುವಾಗಿಲು ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ
ಬೇಡಿಕೆ ಪರಿಗಣಿಸದ ವರ್ತಕರು
ಹೊಗೆಸೊಪ್ಪನ್ನು ದರವನ್ನು ₹320ರಿಂದ ₹270 ₹250ಕ್ಕೆ ಇಳಿಕೆ ಮಾಡಿರುವುದು ರೈತರನ್ನು ಕೆರಳಿಸಿದ್ದು ವರ್ತಕರು ಮತ್ತು ಅಧಿಕಾರಿಗಳ ನಡುವೆ ರೈತರು ಕೆಲ ಮಾತಿನ ಚಕಮಕಿ ನಡೆದಿತ್ತು. ಬೆಲೆ ಏರಿಕೆ ಮಾಡುವಂತೆ ಆಗ್ರಹಿಸಿ ಗುರುವಾರ ಮಾರಾಟ ಪ್ರಕ್ರಿಯೆ ನಿಲ್ಲಿಸುವಂತೆ ರೈತರು ಒತ್ತಾಯಿಸಿದ್ದರು. ಆದರೆ ರೈತರ ಬೇಡಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ವರ್ತಕರು ಶುಕ್ರವಾರದಿಂದ ಮತ್ತೆ ಹರಾಜು ಪ್ರಕ್ರಿಯೆ ಆರಂಭಿಸಿದ್ದು ರೈತರಿಂದ ತಂಬಾಕು ಕೊಳ್ಳುತ್ತಿದ್ದಾರೆ. ‘ಎಲ್ಲರಿಗೂ ಆದಂತೆ ನಮಗೂ ಆಗುತ್ತದೆ’ ಎನ್ನುತ್ತಲೇ ಬೇಸರದಿಂದ ಬೆಳೆಗಾರರು ತಂಬಾಕು ಮಾರಾಟ ಮಾಡುತ್ತಿದ್ದಾರೆ. ರಾಮನಾಥಪುರ ಮಾರುಕಟ್ಟೆಯಲ್ಲಿ ಶುಕ್ರವಾರ ಕೆ.ಜಿ.ಗೆ ಗರಿಷ್ಠ ₹278 ಕನಿಷ್ಠ ₹252 ದೊರೆತಿದ್ದು ಸರಾಸರಿ ಬೆಲೆ ₹252 ದೊರೆತಿದೆ. ಕೆಲ ದಿನಗಳ ಹಿಂದೆ ಗರಿಷ್ಠ ಬೆಲೆ ₹321 ಕನಿಷ್ಠ ₹220 ಹಾಗೂ ಸರಾಸರಿ ಬೆಲೆ ₹279ರಿಂದ ₹292ರವರೆಗೆ ಸಿಗುತ್ತಿತ್ತು. ಈಗ ಸಿಗುತ್ತಿರುವ ದರದಲ್ಲಿ ಮಾರುಕಟ್ಟೆಗೆ ಸಾಗಿಸಿದಲ್ಲಿ ಸಿಂಗಲ್ ಬ್ಯಾರಲ್ ಪರವಾನಗಿ ಹೊಂದಿರುವ ಬೆಳೆಗಾರರಿಗೆ ಸುಮಾರು ₹1 ಲಕ್ಷ ಮತ್ತು ಡಬಲ್ ಬ್ಯಾರಲ್ ಪರವಾನಗಿ ರೈತರಿಗೆ ₹1.5 ಲಕ್ಷಕ್ಕೂ ಹೆಚ್ಚು ನಷ್ಟವಾಗುತ್ತದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT