‘ಒಪ್ಪಂದದ ಪ್ರಕಾರ ತುಮಕೂರು ಜಿಲ್ಲೆಗೆ ಪ್ರತಿ ವರ್ಷ 24 ಟಿಎಂಸಿ ನೀರು ಹರಿಸಬೇಕು. ಆದರೆ, ಕಳೆದ ವರ್ಷ ನಮಗೆ ಸಿಕ್ಕಿರುವುದು ಕೇವಲ 6 ಟಿಎಂಸಿ ನೀರು. ಜೀವಮಾನದಲ್ಲಿ 14 ಟಿಎಂಸಿ ಮೇಲೆ ನೀರು ಬಿಟ್ಟಿಲ್ಲ. ಇದಕ್ಕೆಲ್ಲಾ ರೇವಣ್ಣ ಅಂಡ್ ಕಂಪನಿಯವರೇ ಕಾರಣ. ಎಲ್ಲೆಡೆ ಅವರದೇ ಯಜಮಾನಿಕೆಯಾಗಿದೆ. ಹಾಸನ ಜಿಲ್ಲೆಗೆ ಬೇಕಿರುವುದು 14 ಟಿಎಂಸಿ, ಆದರೆ 44 ಟಿಎಂಸಿ ಬಳಕೆ ಮಾಡುತ್ತಾರೆ’ ಎಂದು ದೂರಿದರು.