
ಕೇಂದ್ರ ಬಜೆಟ್ನಲ್ಲಿ ಮತ್ತೊಮ್ಮೆ ಜಿಲ್ಲೆಯ ಅನ್ಯಾಯ ಮಾಡಲಾಗಿದೆ. ಕಾಡಾನೆ ಸಮಸ್ಯೆ ಐಐಟಿ ಕೈಗಾರಿಕೆಗಳ ಸ್ಥಾಪನೆಯಂತಹ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೂ ಗಮನ ನೀಡಿಲ್ಲ. ನೀರಸ ಬಜೆಟ್ದೇವರಾಜೇಗೌಡ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ
ಕೃಷಿ ನೀರಾವರಿ ಶಿಕ್ಷಣ ಆರೋಗ್ಯ ಸೇರಿದಂತೆ ಜನಸಾಮಾನ್ಯರಿಗೆ ಹತ್ತಿರವಾಗಿರುವ ಯಾವ ಕ್ಷೇತ್ರಗಳಿಗೂ ನಿರೀಕ್ಷಿತ ಅನುದಾನ ಯೋಜನೆ ಘೋಷಿಸಿಲ್ಲ. ಶ್ರೀಮಂತರನ್ನು ಖುಷಿಪಡಿಸುವ ಸಲುವಾಗಿ ಬಜೆಟ್ ಮಂಡಿಸಿದಂತಿದೆ.ಎಂ.ಎ. ಗೋಪಾಲಸ್ವಾಮಿ ವಿಧಾನ ಪರಿಷತ್ ಮಾಜಿ ಸದಸ್ಯ
ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಗೊಳಿಸಲು ರೂಪಿಸಿರುವ ವಂಚನೆಯ ನೀಲನಕ್ಷೆ. ಆಧುನೀಕರಣದ ಸೋಗಿನಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ಹಿಂದೆ ಸರಿಯುವ ಅಕ್ರಮಣಕಾರಿ ಖಾಸಗೀಕರಣದ ಸರ್ಕಾರದ ಕಾರ್ಯಸೂಚಿಯನ್ನು ಮರೆಮಾಚುತ್ತಿದೆ.ಸುಷ್ಮಾ ಎಐಡಿಎಸ್ಒ ಜಿಲ್ಲಾ ಘಟಕದ ಕಾರ್ಯದರ್ಶಿ
ಭಾರತವನ್ನು ವಿಶ್ವ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರ ಮಾಡುವ ಗುರಿ ಉತ್ತಮ. ಪ್ರತಿ ರಾಜ್ಯದಲ್ಲಿ ಮೂರು ರಾಸಾಯನಿಕ ಉದ್ಯಾನಗಳನ್ನು ಸ್ಥಾಪಿಸಲು ಬೆಂಬಲ ನೀಡುವ ಯೋಜನೆಯ ಬಜೆಟ್ನಲ್ಲಿ ಸೇರಿಸಿರುವುದು ಸ್ವಾಗತಾರ್ಹ.ಜಿ.ಎಸ್. ರಾಜ್ಕುಮಾರ್ ಭೂಮಿ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಚನ್ನರಾಯಪಟ್ಟಣ
ಆರೋಗ್ಯ ಶಿಕ್ಷಣ ಕೃಷಿ ಕೈಗಾರಿಕಾ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡುವ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮೇರೆಗೆ ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.ತೋಟಿ ನಾಗರಾಜ್ ಚನ್ನರಾಯಪಟ್ಟಣ ಟಿಎಪಿಎಂಎಸ್ ನಿರ್ದೇಶಕ
ಶಿಕ್ಷಣಕ್ಕೆ ಆದ್ಯತೆ ದೊರಕಿದೆ. 15ಸಾವಿರ ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಷಯವಾರು ಪ್ರಯೋಗಶಾಲೆ ಸ್ಥಾಪಿಸಲು ಉದ್ದೇಶಿಸಿರುವುದು ಒಳ್ಳೆಯ ಬೆಳವಣಿಗೆ. 700 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಆರಂಭಿಸಲು ಹಣ ಮೀಸಲಿಡಲಾಗಿದೆ.ಚೇತನ್ ವರ್ತಕ ಹಳೇಬೀಡು
20 ವರ್ಷಗಳ ದೀರ್ಘಾವಧಿ ಬೆಳವಣಿಗೆ ದೃಷ್ಟಿಕೋನ ಇಟ್ಟುಕೊಂಡು ಆತ್ಮನಿರ್ಭರತೆ ಮೂಲಸೌಕರ್ಯ ಇಂಧನ ಐಟಿ ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗಿದೆ. ದೇಶದ ಆರ್ಥಿಕ ಭವಿಷ್ಯಕ್ಕೆ ಸ್ಪಷ್ಟ ದಿಕ್ಕು ನೀಡುವಂಥದ್ದಾಗಿದೆ.ಎಚ್.ಎ. ಕಿರಣ್ ಎಫ್ಕೆಸಿಸಿಐ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.