ಕೆಲ ತಿಂಗಳುಗಳ ಹಿಂದೆ ಮಾಧ್ಯಮಗಳಲ್ಲಿ ಶಿಶು ಮರಣ ಪ್ರಮಾಣದಲ್ಲಿ ಹಠಾತ್ ಹೆಚ್ಚಳದ ವರದಿಗಳು ಪ್ರಕಟಗೊಂಡವು. ಇದರಿಂದ ರಾಜ್ಯಾದ್ಯಂತ ಚರ್ಚೆ ಆರಂಭಗೊಂಡಿತು ಎಂದರು. ಬೆಂಗಳೂರಿನ ನವಜಾತ ಶಿಶು ತಜ್ಞೆ ಡಾ. ಸ್ವರ್ಣರೇಖಾ ಭಟ್ ನೇತೃತ್ವದ ಶಾಸ್ತ್ರಜ್ಞರ ತಂಡ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿತು.
ಕಾರ್ಯಾಗಾರದಲ್ಲಿ ಹಾಸನ ಸುತ್ತಮುತ್ತಲ ಜಿಲ್ಲೆಗಳ ಶುಶ್ರೂಷಕರು ಭಾಗವಹಿಸಿದ್ದರು. ಡಾ. ಅಭಿಷೇಕ್, ಬೆಂಗಳೂರಿನ ಡಾ.ಭಾರತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಶಂಕರ್, ಡಾ. ಪ್ರಸನ್ನಕುಮಾರ್, ಡಾ. ಲಕ್ಷ್ಮಿಕಾಂತ್ ಇದ್ದರು.