ಹೇಮಾವತಿ ಜಲಾಶಯದಿಂದ ಭೋರ್ಗರೆಯುತ್ತಿರುವ ನೀರು (ಸಂಗ್ರಹ ಚಿತ್ರ)
–ಪ್ರಜಾವಾಣಿ ಚಿತ್ರ/ಅತೀಖುರ್ ರಹಮಾನ್
ಹಾಸನ: ಹೇಮಾವತಿ ಜಲಾಶಯಕ್ಕೆ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನದಿಗೆ 1 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತದೆ ಎಂದು ಹೇಮಾವತಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗಂಗಾಧರ ತಿಳಿಸಿದ್ದಾರೆ.
ADVERTISEMENT
ADVERTISEMENT
ಬೆಳಿಗ್ಗೆ 50 ಸಾವಿರ ಕ್ಯುಸೆಕ್ ನೀರು ಬಿಡಲಾಗಿತ್ತು. ನಂತರ 65 ಸಾವಿರ ಕ್ಯುಸೆಕ್, 73 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು. ಇದೀಗ ಯಾವುದೇ ಕ್ಷಣದಲ್ಲಿ 80 ಸಾವಿರ ಕ್ಯುಸೆಕ್ನಿಂದ 1 ಲಕ್ಷ ಕ್ಯುಸೆಕ್ವರೆಗೆ ನದಿಗೆ ನೀರು ಹರಿಸಲಾಗುತ್ತಿದೆ.
ಹೇಮಾವತಿ ನದಿಯ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ನದಿ ತೀರದ ನಿವಾಸಿಗಳು ಮುಂಜಾಗ್ರತೆ ವಹಿಸಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.