ಹದಿನಾಲ್ಕು ಕಾಡಾನೆಗಳ ಹಿಂಡು ಹಸಿಡೆ, ಹಲಸುಲಿಗೆ, ಮಾಸುವಳ್ಳಿ ಸುತ್ತ ಸಂಚರಿಸುತ್ತಿದ್ದು,ಕಾಫಿ ತೋಟಗಳಲ್ಲಿ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಗುರುವಾರ ಹಲಸುಲಿಗೆಯಲ್ಲಿ ಆನೆಗಳ ಹಿಂಡು ರಸ್ತೆ ದಾಟಿದ್ದು, ನಡೆದು ಹೋಗುತ್ತಿದ್ದ ಜನರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ತಂಡದಲ್ಲಿದ್ದ ಆನೆಗೆ ರೇಡಿಯೋ ಕಾಲರ್ ಅಳವಡಿಸಿರುವುದು ಕಂಡು
ಬಂದಿದೆ.