ಯೋಗಾ ರಮೇಶ್ ಪ್ರತಿನಿಧಿಸುವ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಅವರ ನೂರಾರು ಬೆಂಬಲಿಗರೂ ಆಗಮಿಸಿದ್ದರು. ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದ ಇವರು, ಜಿಲ್ಲಾಧ್ಯಕ್ಷರೂ ಆಗಿ ಪಕ್ಷಸಂಘಟನೆಗೆ ತಮ್ಮದೇ ಕೊಡುಗೆ ನೀಡಿದ್ದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿಪರಾಭವಗೊಂಡಿದ್ದರು. ಆದರೆ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎ.ಮಂಜುಅವರು ಬಿಜೆಪಿ ಸೇರಿದ ನಂತರ ಪಕ್ಷ ತ್ಯಜಿಸಿದ್ದರು. ನಂತರ ಕಾಂಗ್ರೆಸ್ ಸೇರಿದ್ದರೂ, ಎಲ್ಲೂ ಕೂಡಸಕ್ರಿಯವಾಗಿ ಗುರುತಿಸಿಕೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆ ಪಕ್ಷದಿಂದಲೂ ದೂರ ಉಳಿದುಪೊಟ್ಯಾಟೋ ಕ್ಲಬ್ಗೆ ಮತ್ತಷ್ಟು ಪುನಶ್ಚೇತನ ನೀಡಿ ರೈತರ ಹಲವು ಸಮಸ್ಯೆಗಳ ಪರ ದನಿಎತ್ತುತ್ತಿದ್ದರು.