<p><strong>ರಾಮನಾಥಪುರ:</strong> ಕೊಣನೂರಿನ ಮಾರ್ಗವಾಗಿ ಕೆರೆಕೊಡಿ ಗ್ರಾಮ, ಬಿಸ್ಲಹಳ್ಳಿ, ಹಂಡ್ರಂಗಿ, ಕೆಸವತ್ತೂರು ಇನ್ನು ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಕೆರೆಕೋಡಿ ರಸ್ತೆ ನೂರಾರು ವರ್ಷ ಹಳೆಯದು. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಕೊಣನೂರಿಗೆ ವಾಹನದ ಮೂಲಕ ಬರಬೇಕಾಗಿದೆ.<br /> <br /> ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು ಕೆರೆಗೆ ತಡೆಗೋಡೆ ಇಲ್ಲದ ಪರಿಣಾಮ ಅನಾಹುತ ಸಂಭವಿಸುವ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಕೆರೆ ಏರಿಮೇಲೆ ಒಡಾಡುವುದೇ ದೊಡ್ಡ ಸವಾಲು ಎನ್ನುತ್ತಾರೆ ಕೆರೆಕೊಡಿ ಗ್ರಾಮದ ರಾಮೇಗೌಡ.<br /> ಕೆರೆಯ ಎಡಭಾಗದಲ್ಲಿ ಸುಮಾರು 25 ಅಡಿ ಆಳವಿರುವ ಅಡಿಕೆ ತೋಟವಿದೆ. ಇನ್ನು ಬಲಭಾಗದಲ್ಲಿ ಸುಮಾರು 50 ಅಡಿ ಆಳವಿರುವ ಅದರಲ್ಲೂ ಒಮ್ಮೆಯೂ ಹೂಳೆತ್ತದ ಈ ಕೆರೆ ಯಾವ ಋತುಮಾನದಲ್ಲಿಯೂ ನೀರು ಇಂಗಿರುವುದಿಲ್ಲ.<br /> <br /> ಕೆರೆ ಏರಿ ವಿಸ್ತರಣೆ ಮತ್ತು ತಡೆಗೋಡೆ ನಿರ್ಮಾಣ ತುರ್ತಾಗಿ ನಡೆಯಬೇಕಿದೆ. ಪ್ರಸ್ತುತ ಕೆರೆ ಸಂಪೂರ್ಣವಾಗಿ ತುಂಬಿರುವುದರಿಂದ ಯಾವುದೇ ಕಾಮಗಾರಿ ಮಾಡುವುದು ಕಷ್ಟ. ಅದರೆ ಕೆರೆ ಏರಿ ಎರಡು ಕಡೆ ಕಬ್ಬಿಣದ ರಾಡುಗಳನ್ನು ನೆಟ್ಟು ತಾತ್ಕಲಿಕವಾಗಿ ರಕ್ಷಣೆ ಒದಗಿಸಬೇಕಿದೆ.</p>.<p>ಕೆರೆ ಏರಿಯನ್ನು ಹಿಂದಿನ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಲಾಗಿದ್ದು ಪ್ರಸ್ತುತ ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ. ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ಹೋಗಿ ಬರುವ ಮಕ್ಕಳು, ಸಾರ್ವಜನಿಕರು ಮನೆಗೆ ತಲುಪುವ ತನಕ ಪೋಷಕರಿಗೆ ಆತಂಕ ಕಟ್ಟಿಟ್ಟ ಬುತ್ತಿ.<br /> <br /> ಈ ಕೂಡಲೆ ಸಂಭಂದಪಟ್ಟ ಇಲಾಖೆ ಹಾಗೂ ಜನ ಪ್ರತಿನಿಧಿಗಳು ಗಮನ ಹರಿಸದೆ ಹೋದರೆ ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಾಥಪುರ:</strong> ಕೊಣನೂರಿನ ಮಾರ್ಗವಾಗಿ ಕೆರೆಕೊಡಿ ಗ್ರಾಮ, ಬಿಸ್ಲಹಳ್ಳಿ, ಹಂಡ್ರಂಗಿ, ಕೆಸವತ್ತೂರು ಇನ್ನು ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಕೆರೆಕೋಡಿ ರಸ್ತೆ ನೂರಾರು ವರ್ಷ ಹಳೆಯದು. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಕೊಣನೂರಿಗೆ ವಾಹನದ ಮೂಲಕ ಬರಬೇಕಾಗಿದೆ.<br /> <br /> ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು ಕೆರೆಗೆ ತಡೆಗೋಡೆ ಇಲ್ಲದ ಪರಿಣಾಮ ಅನಾಹುತ ಸಂಭವಿಸುವ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಕೆರೆ ಏರಿಮೇಲೆ ಒಡಾಡುವುದೇ ದೊಡ್ಡ ಸವಾಲು ಎನ್ನುತ್ತಾರೆ ಕೆರೆಕೊಡಿ ಗ್ರಾಮದ ರಾಮೇಗೌಡ.<br /> ಕೆರೆಯ ಎಡಭಾಗದಲ್ಲಿ ಸುಮಾರು 25 ಅಡಿ ಆಳವಿರುವ ಅಡಿಕೆ ತೋಟವಿದೆ. ಇನ್ನು ಬಲಭಾಗದಲ್ಲಿ ಸುಮಾರು 50 ಅಡಿ ಆಳವಿರುವ ಅದರಲ್ಲೂ ಒಮ್ಮೆಯೂ ಹೂಳೆತ್ತದ ಈ ಕೆರೆ ಯಾವ ಋತುಮಾನದಲ್ಲಿಯೂ ನೀರು ಇಂಗಿರುವುದಿಲ್ಲ.<br /> <br /> ಕೆರೆ ಏರಿ ವಿಸ್ತರಣೆ ಮತ್ತು ತಡೆಗೋಡೆ ನಿರ್ಮಾಣ ತುರ್ತಾಗಿ ನಡೆಯಬೇಕಿದೆ. ಪ್ರಸ್ತುತ ಕೆರೆ ಸಂಪೂರ್ಣವಾಗಿ ತುಂಬಿರುವುದರಿಂದ ಯಾವುದೇ ಕಾಮಗಾರಿ ಮಾಡುವುದು ಕಷ್ಟ. ಅದರೆ ಕೆರೆ ಏರಿ ಎರಡು ಕಡೆ ಕಬ್ಬಿಣದ ರಾಡುಗಳನ್ನು ನೆಟ್ಟು ತಾತ್ಕಲಿಕವಾಗಿ ರಕ್ಷಣೆ ಒದಗಿಸಬೇಕಿದೆ.</p>.<p>ಕೆರೆ ಏರಿಯನ್ನು ಹಿಂದಿನ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಲಾಗಿದ್ದು ಪ್ರಸ್ತುತ ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ. ಈ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ಹೋಗಿ ಬರುವ ಮಕ್ಕಳು, ಸಾರ್ವಜನಿಕರು ಮನೆಗೆ ತಲುಪುವ ತನಕ ಪೋಷಕರಿಗೆ ಆತಂಕ ಕಟ್ಟಿಟ್ಟ ಬುತ್ತಿ.<br /> <br /> ಈ ಕೂಡಲೆ ಸಂಭಂದಪಟ್ಟ ಇಲಾಖೆ ಹಾಗೂ ಜನ ಪ್ರತಿನಿಧಿಗಳು ಗಮನ ಹರಿಸದೆ ಹೋದರೆ ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>