<p><strong>ಅರಸೀಕೆರೆ: </strong>ಕೃಷಿ ಚಟುವಟಿಕೆಯಲ್ಲಿ ಆಡಂಬರ ಕಟ್ಟಿಕೊಂಡು ಹಗಲೂಟಕ್ಕೆ ಪರದಾಡಿದರು ಎಂಬ ರೈತ ಮಾತಿನಂತೆ. ಸಣ್ಣ ಹಿಡುವಳಿ ಹೊಂದಿರುವವರು ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂಬುದಕ್ಕೆ ರೈತ ಎಸ್.ಎಂ. ಸೋಮಶೇಖರ್ 8 ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆ ಬೆಳೆದು ಯಶಸ್ಸು ಸಾಧಿಸಿರುವುದು ತಾಲ್ಲೂಕಿನ ರೈತರಿಗೆ ಆಶಾಭಾವನೆ ಮೂಡಿಸಿದ್ದಾರೆ.</p>.<p>ಸದಾ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಗ್ರಾಮಗಳು ಕಳೆದ ಒಂದು ದಶಕದಿಂದ ಸಾಂಪ್ರದಾಯಿಕ ಬೆಳೆ ಬದಲು ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕ ಉನ್ನತಿ ಸಾಧಿಸಿದ್ದಾರೆ.</p>.<p>ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಅಂಬಿನಕೆರೆ ಗ್ರಾಮದ ಸೋಮಶೇಖರ್ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ದಾಳಿಂಬೆ ಫಸಲು ಬೆಳೆಯುವ ಮೂಲಕ ಇದಕ್ಕೆ ಸೂಕ್ತ ಉದಾಹರಣೆ.</p>.<p>ಕಣಕಟ್ಟೆ ಹೋಬಳಿಯ ಸುತ್ತಮುತ್ತ 800 ಅಡಿ ಕೊರೆದರೂ ನೀರು ಅಲಭ್ಯ. ದಾಳಿಂಬೆಯನ್ನು ಪ್ರಮುಖ ಬೆಳೆಯಾಗಿ ಬೆಳೆದು ಯಶಸ್ಸು ಸಹ ಕಂಡಿದ್ದಾರೆ. ಈಗ ಬಯಲು ಸೀಮೆಯ ಬಂಗಾರದ ಬೆಳೆ ಇದಾಗಿದೆ.</p>.<p>ಸೋಮಶೇಖರ್ ಅವರು ತಮ್ಮ 8ಎಕರೆ ಜಮೀನಿನಲ್ಲಿ 5000 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿ ಗಿಡದಲ್ಲಿ 70ರಿಂದ 90 ಹಣ್ಣುಗಳನ್ನು ಕಾಣಬಹುದು.<br /> ಪ್ರತಿ ಹಣ್ಣು 500 ಗ್ರಾಂನಿಂದ 800 ಗ್ರಾಂ ತೂಕ ಬರುತ್ತದೆ.</p>.<p>ಈಗಾಗಲೇ ಕೆ.ಜಿಗೆ ₹ 85ರಂತೆ ಸ್ಥಳದಲ್ಲಿಯೇ ಒಟ್ಟು 3,000 ಬಾಕ್ಸ್ ಮಾರಾಟ ಮಾಡಿ, ₹ 28 ಲಕ್ಷ ಆದಾಯ ಗಳಿಸಿದ್ದಾರೆ.</p>.<p>ದಾಳಿಂಬೆ ಫಲಕ್ಕೆ ಬರುವ ಹಂತದಲ್ಲಿ ನಿಯಮಿತವಾಗಿ ನೀರುಣಿಸಿದಲ್ಲಿ ಮಾತ್ರವೇ ರೈತನಿಗೆ ಲಾಭ. ನೀರಿಲ್ಲದ ವೇಳೆ ಹಣ್ಣಿನ ಜತೆ ಸಿಪ್ಪೆ ಬೆಳೆಯುವುದು ಕಷ್ಟ. ಸಿಪ್ಪೆ ಸಹ ತೆಳುವಾಗುತ್ತದೆ. ಈಗ ದಾಳಿಂಬೆ ಉತ್ತಮ ಫಸಲು ಬಂದಿದೆ ಎನ್ನುತ್ತಾರೆ ಸೋಮಶೇಖರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ: </strong>ಕೃಷಿ ಚಟುವಟಿಕೆಯಲ್ಲಿ ಆಡಂಬರ ಕಟ್ಟಿಕೊಂಡು ಹಗಲೂಟಕ್ಕೆ ಪರದಾಡಿದರು ಎಂಬ ರೈತ ಮಾತಿನಂತೆ. ಸಣ್ಣ ಹಿಡುವಳಿ ಹೊಂದಿರುವವರು ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂಬುದಕ್ಕೆ ರೈತ ಎಸ್.ಎಂ. ಸೋಮಶೇಖರ್ 8 ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆ ಬೆಳೆದು ಯಶಸ್ಸು ಸಾಧಿಸಿರುವುದು ತಾಲ್ಲೂಕಿನ ರೈತರಿಗೆ ಆಶಾಭಾವನೆ ಮೂಡಿಸಿದ್ದಾರೆ.</p>.<p>ಸದಾ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಗ್ರಾಮಗಳು ಕಳೆದ ಒಂದು ದಶಕದಿಂದ ಸಾಂಪ್ರದಾಯಿಕ ಬೆಳೆ ಬದಲು ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕ ಉನ್ನತಿ ಸಾಧಿಸಿದ್ದಾರೆ.</p>.<p>ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಅಂಬಿನಕೆರೆ ಗ್ರಾಮದ ಸೋಮಶೇಖರ್ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ದಾಳಿಂಬೆ ಫಸಲು ಬೆಳೆಯುವ ಮೂಲಕ ಇದಕ್ಕೆ ಸೂಕ್ತ ಉದಾಹರಣೆ.</p>.<p>ಕಣಕಟ್ಟೆ ಹೋಬಳಿಯ ಸುತ್ತಮುತ್ತ 800 ಅಡಿ ಕೊರೆದರೂ ನೀರು ಅಲಭ್ಯ. ದಾಳಿಂಬೆಯನ್ನು ಪ್ರಮುಖ ಬೆಳೆಯಾಗಿ ಬೆಳೆದು ಯಶಸ್ಸು ಸಹ ಕಂಡಿದ್ದಾರೆ. ಈಗ ಬಯಲು ಸೀಮೆಯ ಬಂಗಾರದ ಬೆಳೆ ಇದಾಗಿದೆ.</p>.<p>ಸೋಮಶೇಖರ್ ಅವರು ತಮ್ಮ 8ಎಕರೆ ಜಮೀನಿನಲ್ಲಿ 5000 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಪ್ರತಿ ಗಿಡದಲ್ಲಿ 70ರಿಂದ 90 ಹಣ್ಣುಗಳನ್ನು ಕಾಣಬಹುದು.<br /> ಪ್ರತಿ ಹಣ್ಣು 500 ಗ್ರಾಂನಿಂದ 800 ಗ್ರಾಂ ತೂಕ ಬರುತ್ತದೆ.</p>.<p>ಈಗಾಗಲೇ ಕೆ.ಜಿಗೆ ₹ 85ರಂತೆ ಸ್ಥಳದಲ್ಲಿಯೇ ಒಟ್ಟು 3,000 ಬಾಕ್ಸ್ ಮಾರಾಟ ಮಾಡಿ, ₹ 28 ಲಕ್ಷ ಆದಾಯ ಗಳಿಸಿದ್ದಾರೆ.</p>.<p>ದಾಳಿಂಬೆ ಫಲಕ್ಕೆ ಬರುವ ಹಂತದಲ್ಲಿ ನಿಯಮಿತವಾಗಿ ನೀರುಣಿಸಿದಲ್ಲಿ ಮಾತ್ರವೇ ರೈತನಿಗೆ ಲಾಭ. ನೀರಿಲ್ಲದ ವೇಳೆ ಹಣ್ಣಿನ ಜತೆ ಸಿಪ್ಪೆ ಬೆಳೆಯುವುದು ಕಷ್ಟ. ಸಿಪ್ಪೆ ಸಹ ತೆಳುವಾಗುತ್ತದೆ. ಈಗ ದಾಳಿಂಬೆ ಉತ್ತಮ ಫಸಲು ಬಂದಿದೆ ಎನ್ನುತ್ತಾರೆ ಸೋಮಶೇಖರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>