<p>ಹಾಸನ: ಗೊರೂರಿನ ಪ್ರವಾಸಿ ಮಂದಿರ ದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ನಗರಸಭೆಯ 2012- 13ನೇ ಸಾಲಿಗೆ 26,89,862 ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.<br /> <br /> ಪ್ರಸಕ್ತ ಸಾಲಿನಲ್ಲಿ ಆರಂಭ ಶಿಲ್ಕು 5,24,01,379 ರೂಪಾಯಿ ಸೇರಿದಂತೆ ನಗರ ಸಭೆ 72,98,11,862 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದ್ದು, 72,71,22,000 ರೂಪಾಯಿ ಖರ್ಚಿನ ಬಜೆಟ್ ರೂಪಿಸಿದೆ.<br /> <br /> `ರಸ್ತೆ ಕಾಮಗಾರಿ, ಡಾಂಬರೀಕರಣ, ರಸ್ತೆ ಉನ್ನತೀಕರಣಕ್ಕೆ ಗರಿಷ್ಠ ಐದು ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜಿಸಲಾಗಿದೆ. ಉಳಿದಂತೆ ರಸ್ತೆಬದಿ ಚರಂಡಿ ನಿರ್ಮಾಣಕ್ಕೆ ನಾಲ್ಕು ಕೋಟಿ, ಹೊಸ ಬಡಾವಣೆಗಳ ಅಭಿವೃದ್ಧಿಗೆ 3 ಕೋಟಿ, ಕೊಳಚೆ ಪ್ರದೇಶ ಅಭಿವೃದ್ಧಿಗೆ 1.50 ಕೋಟಿ ರೂಪಾಯಿ ವೆಚ್ಚ ಮಾಡುವ ಪ್ರಸ್ತಾವನೆ ಇದೆ.<br /> <br /> ಬಸ್ ನಿಲ್ದಾಣಗಳ ನಿರ್ಮಾಣಕ್ಕೆ 40ಲಕ್ಷ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ಮೀಸಲಿಡಲಾಗಿದೆ.<br /> <br /> <strong>ಆಕ್ಷೇಪ:</strong> `ದಾಖಲೆಗಳಲ್ಲಿ ಬರಿಯ ಆದಾಯ ಖರ್ಚುಗಳನ್ನು ತೋರಿಸಿದರೇನು ಬಂತು ? ಅದನ್ನು ಜಾರಿ ಮಾಡುವ ಇಚ್ಛಾಶಕ್ತಿ ಬೇಕು. ಅಂಥ ಶಕ್ತಿ ನಿಮಗೆ ಇಲ್ಲ~ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಯಶವಂತ್ ಅವರು ಅಧ್ಯಕ್ಷ ಸಿ.ಆರ್. ಶಂಕರ್ ಮೇಲೆ ನೇರವಾಗಿ ದಾಳಿ ನಡೆಸಿದರು.<br /> <br /> ಮಂಗಳವಾರ ಶಂಕರ್ ಅವರು ನಗರಸಭೆಯ 2012-13ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಮಾತನಾಡಿದ ಯಶವಂತ್, `ಈ ಬಜೆಟ್ ಸುಳ್ಳಿನ ಕಂತೆ. ಬಜೆಟ್ನಲ್ಲಿ ಆದಾಯ ಮತ್ತು ಖರ್ಚನ್ನು ತೋರಿಸುವುದು ಸುಲಭ. ಆದರೆ ಆದಾಯವನ್ನು ಕ್ರೂಢಿ ೀಕರಿಸುವ ಶಕ್ತಿ ಅಧ್ಯಕ್ಷರಿಗಾಗಲಿ, ನಗರಸಭೆಯ ಸಿಬ್ಬಂದಿಗಾಗಲಿ ಇಲ್ಲ. <br /> <br /> ನಗರಸಭೆಯ ಮಳಿಗೆಗಳಿಂದ 40 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಕಳೆದ ವರ್ಷವೂ ಸುಮಾರು ಇಷ್ಟೇ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಬಂದಿರುವುದು 18 ಲಕ್ಷ ರೂಪಾಯಿ ಮಾತ್ರ. ಉದ್ದಿಮೆ ಪರವಾನಿಗೆ ಶುಲ್ಕದ ರೂಪದಲ್ಲಿ 8 ಲಕ್ಷ ನಿರೀಕ್ಷಿಸಿದ್ದರೆ, ಬಂದಿದ್ದು ಕೇವಲ 4 ಲಕ್ಷ. ಬರಬೇಕಾದ ಬಾಡಿಗೆಯನ್ನು ವಸೂಲಿ ಮಾಡುವ ಶಕ್ತಿ ಇಲ್ಲದ ಮೇಲೆ ಬಜೆಟ್ನಲ್ಲಿ ಅದನ್ನು ತೋರಿಸುವುದೇಕೆ ? ಎಂದು ಅಧ್ಯಕ್ಷರಿಗೆ ಸವಾಲೆಸೆದರು.<br /> <br /> `ಕುಡಿಯುವ ನೀರಿನ ಬಗ್ಗೆ ಬಜೆಟ್ನಲ್ಲಿ ಹೆಚ್ಚಿನ ಉಲ್ಲೇಖವಿಲ್ಲ, ಎರಡನೇ ಹಂತದ ಯೋಜನೆಯ ಪ್ರಸ್ತಾಪವಿಲ್ಲ, ಡಂಪಿಂಗ್ ಯಾರ್ಡ್, ನಗರದಲ್ಲಿ ಫುಟ್ಪಾತ್, ಶೌಚಾಲಯಗಳ ನಿರ್ಮಾಣ ಮತ್ತಿತರ ಹಲವು ವಿಚಾರಗಳನ್ನು ಕಳೆದ ಬಜೆಟ್ನಲ್ಲೂ ಉಲ್ಲೇಖಿಸಿ ಹಣ ಮೀಸಲಿಡಲಾಗಿತ್ತು. ಅಂಥ ಯಾವ ಕಾಮಗಾರಿಯೂ ನಗರದಲ್ಲಿ ಆಗಿಲ್ಲ. ಈ ಬಾರಿ ಮತ್ತೆ ಅದನ್ನೇ ಹೇಳಿದ್ದೀರಿ ಎಂದು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಆದರೆ ಬಿಜೆಪಿಯ ಕೆ.ಟಿ. ಪ್ರಕಾಶ್, ಜೆಡಿಎಸ್ನ ಡಾ.ಎಚ್.ಎಸ್. ಅನಿಲ್ ಕುಮಾರ್ ಹಾಗೂ ಸಯ್ಯದ್ ಅಕ್ಬರ್ ಅವರು ಬಜೆಟ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, `ಇದು ಆಶಾದಾಯಕ ಬಜೆಟ್, ಕಟ್ಟುನಿಟ್ಟಾಗಿ ಜಾರಿಮಾಡುವ ಪ್ರಯತ್ನವನ್ನು ಮಾಡಬೇಕು~ ಎಂದು ಸಲಹೆ ನೀಡಿದರು.<br /> <br /> `ಹಾಸನದ ಜನಸಂಖ್ಯೆ ಹೆಚ್ಚಾಗುತ್ತಿದೆ, ನಗರವೂ ಬೆಳೆಯುತ್ತಿದೆ ಇದನ್ನು ಮನಗಂಡು ನೀರು ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿತ್ತು. ಕಳೆದ ವರ್ಷ ನೀರಿನ ಕಂದಾಯ ಹೆಚ್ಚಿಸಲಾಗಿದೆ. ಆದರೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಲ್ಲ. ಉಳಿದ ಮಳಿಗೆಗಳ ಬಾಡಿಗೆ, ಕಂದಾಯ ವಸೂಲಿಯಲ್ಲೂ ನಗರಸಭೆ ಆಸಕ್ತಿ ವಹಿಸುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ ನೋಡಿದರೆ ಬಜೆಟ್ ಅವೈಜ್ಞಾನಿಕವಾಗಿದೆ ಮಾತ್ರವಲ್ಲದೆ ದೂರದೃಷ್ಟಿಯೂ ಇಲ್ಲ~ ಎಂದು ಬಿಜೆಪಿಯ ಡಿ. ಪ್ರಸನ್ನ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಗೊರೂರಿನ ಪ್ರವಾಸಿ ಮಂದಿರ ದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ನಗರಸಭೆಯ 2012- 13ನೇ ಸಾಲಿಗೆ 26,89,862 ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.<br /> <br /> ಪ್ರಸಕ್ತ ಸಾಲಿನಲ್ಲಿ ಆರಂಭ ಶಿಲ್ಕು 5,24,01,379 ರೂಪಾಯಿ ಸೇರಿದಂತೆ ನಗರ ಸಭೆ 72,98,11,862 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದ್ದು, 72,71,22,000 ರೂಪಾಯಿ ಖರ್ಚಿನ ಬಜೆಟ್ ರೂಪಿಸಿದೆ.<br /> <br /> `ರಸ್ತೆ ಕಾಮಗಾರಿ, ಡಾಂಬರೀಕರಣ, ರಸ್ತೆ ಉನ್ನತೀಕರಣಕ್ಕೆ ಗರಿಷ್ಠ ಐದು ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜಿಸಲಾಗಿದೆ. ಉಳಿದಂತೆ ರಸ್ತೆಬದಿ ಚರಂಡಿ ನಿರ್ಮಾಣಕ್ಕೆ ನಾಲ್ಕು ಕೋಟಿ, ಹೊಸ ಬಡಾವಣೆಗಳ ಅಭಿವೃದ್ಧಿಗೆ 3 ಕೋಟಿ, ಕೊಳಚೆ ಪ್ರದೇಶ ಅಭಿವೃದ್ಧಿಗೆ 1.50 ಕೋಟಿ ರೂಪಾಯಿ ವೆಚ್ಚ ಮಾಡುವ ಪ್ರಸ್ತಾವನೆ ಇದೆ.<br /> <br /> ಬಸ್ ನಿಲ್ದಾಣಗಳ ನಿರ್ಮಾಣಕ್ಕೆ 40ಲಕ್ಷ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ಮೀಸಲಿಡಲಾಗಿದೆ.<br /> <br /> <strong>ಆಕ್ಷೇಪ:</strong> `ದಾಖಲೆಗಳಲ್ಲಿ ಬರಿಯ ಆದಾಯ ಖರ್ಚುಗಳನ್ನು ತೋರಿಸಿದರೇನು ಬಂತು ? ಅದನ್ನು ಜಾರಿ ಮಾಡುವ ಇಚ್ಛಾಶಕ್ತಿ ಬೇಕು. ಅಂಥ ಶಕ್ತಿ ನಿಮಗೆ ಇಲ್ಲ~ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಯಶವಂತ್ ಅವರು ಅಧ್ಯಕ್ಷ ಸಿ.ಆರ್. ಶಂಕರ್ ಮೇಲೆ ನೇರವಾಗಿ ದಾಳಿ ನಡೆಸಿದರು.<br /> <br /> ಮಂಗಳವಾರ ಶಂಕರ್ ಅವರು ನಗರಸಭೆಯ 2012-13ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಮಾತನಾಡಿದ ಯಶವಂತ್, `ಈ ಬಜೆಟ್ ಸುಳ್ಳಿನ ಕಂತೆ. ಬಜೆಟ್ನಲ್ಲಿ ಆದಾಯ ಮತ್ತು ಖರ್ಚನ್ನು ತೋರಿಸುವುದು ಸುಲಭ. ಆದರೆ ಆದಾಯವನ್ನು ಕ್ರೂಢಿ ೀಕರಿಸುವ ಶಕ್ತಿ ಅಧ್ಯಕ್ಷರಿಗಾಗಲಿ, ನಗರಸಭೆಯ ಸಿಬ್ಬಂದಿಗಾಗಲಿ ಇಲ್ಲ. <br /> <br /> ನಗರಸಭೆಯ ಮಳಿಗೆಗಳಿಂದ 40 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಕಳೆದ ವರ್ಷವೂ ಸುಮಾರು ಇಷ್ಟೇ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಬಂದಿರುವುದು 18 ಲಕ್ಷ ರೂಪಾಯಿ ಮಾತ್ರ. ಉದ್ದಿಮೆ ಪರವಾನಿಗೆ ಶುಲ್ಕದ ರೂಪದಲ್ಲಿ 8 ಲಕ್ಷ ನಿರೀಕ್ಷಿಸಿದ್ದರೆ, ಬಂದಿದ್ದು ಕೇವಲ 4 ಲಕ್ಷ. ಬರಬೇಕಾದ ಬಾಡಿಗೆಯನ್ನು ವಸೂಲಿ ಮಾಡುವ ಶಕ್ತಿ ಇಲ್ಲದ ಮೇಲೆ ಬಜೆಟ್ನಲ್ಲಿ ಅದನ್ನು ತೋರಿಸುವುದೇಕೆ ? ಎಂದು ಅಧ್ಯಕ್ಷರಿಗೆ ಸವಾಲೆಸೆದರು.<br /> <br /> `ಕುಡಿಯುವ ನೀರಿನ ಬಗ್ಗೆ ಬಜೆಟ್ನಲ್ಲಿ ಹೆಚ್ಚಿನ ಉಲ್ಲೇಖವಿಲ್ಲ, ಎರಡನೇ ಹಂತದ ಯೋಜನೆಯ ಪ್ರಸ್ತಾಪವಿಲ್ಲ, ಡಂಪಿಂಗ್ ಯಾರ್ಡ್, ನಗರದಲ್ಲಿ ಫುಟ್ಪಾತ್, ಶೌಚಾಲಯಗಳ ನಿರ್ಮಾಣ ಮತ್ತಿತರ ಹಲವು ವಿಚಾರಗಳನ್ನು ಕಳೆದ ಬಜೆಟ್ನಲ್ಲೂ ಉಲ್ಲೇಖಿಸಿ ಹಣ ಮೀಸಲಿಡಲಾಗಿತ್ತು. ಅಂಥ ಯಾವ ಕಾಮಗಾರಿಯೂ ನಗರದಲ್ಲಿ ಆಗಿಲ್ಲ. ಈ ಬಾರಿ ಮತ್ತೆ ಅದನ್ನೇ ಹೇಳಿದ್ದೀರಿ ಎಂದು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಆದರೆ ಬಿಜೆಪಿಯ ಕೆ.ಟಿ. ಪ್ರಕಾಶ್, ಜೆಡಿಎಸ್ನ ಡಾ.ಎಚ್.ಎಸ್. ಅನಿಲ್ ಕುಮಾರ್ ಹಾಗೂ ಸಯ್ಯದ್ ಅಕ್ಬರ್ ಅವರು ಬಜೆಟ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, `ಇದು ಆಶಾದಾಯಕ ಬಜೆಟ್, ಕಟ್ಟುನಿಟ್ಟಾಗಿ ಜಾರಿಮಾಡುವ ಪ್ರಯತ್ನವನ್ನು ಮಾಡಬೇಕು~ ಎಂದು ಸಲಹೆ ನೀಡಿದರು.<br /> <br /> `ಹಾಸನದ ಜನಸಂಖ್ಯೆ ಹೆಚ್ಚಾಗುತ್ತಿದೆ, ನಗರವೂ ಬೆಳೆಯುತ್ತಿದೆ ಇದನ್ನು ಮನಗಂಡು ನೀರು ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿತ್ತು. ಕಳೆದ ವರ್ಷ ನೀರಿನ ಕಂದಾಯ ಹೆಚ್ಚಿಸಲಾಗಿದೆ. ಆದರೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಲ್ಲ. ಉಳಿದ ಮಳಿಗೆಗಳ ಬಾಡಿಗೆ, ಕಂದಾಯ ವಸೂಲಿಯಲ್ಲೂ ನಗರಸಭೆ ಆಸಕ್ತಿ ವಹಿಸುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ ನೋಡಿದರೆ ಬಜೆಟ್ ಅವೈಜ್ಞಾನಿಕವಾಗಿದೆ ಮಾತ್ರವಲ್ಲದೆ ದೂರದೃಷ್ಟಿಯೂ ಇಲ್ಲ~ ಎಂದು ಬಿಜೆಪಿಯ ಡಿ. ಪ್ರಸನ್ನ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>