<p><strong>ರಾಮನಾಥಪುರ:</strong> ಕೊಣನೂರು ಹೋಬಳಿಯ ಕೆಸವತ್ತೂರು ಬಳಿ ನೆಲೆಸಿರುವ 15 ದಲಿತ ಕುಟುಂಬಗಳು ಮೂಲಸೌಲಭ್ಯಗಳೂ ಇಲ್ಲದೆ ಹಲವು ವರ್ಷಗಳಿಂದ ಯಾತನೆಯ ಬದುಕು ಸಾಗಿಸುತ್ತಿವೆ.<br /> <br /> ಹಿಂದೆ ಗ್ರಾಮದ ದಲಿತ ಕಾಲೊನಿಯಲ್ಲಿ ವಾಸವಾಗಿದ್ದ ಸುಮಾರು 45 ಕುಟುಂಬಗಳು 2 ದಶಕಗಳ ಹಿಂದೆ ಅಲ್ಲಿನ ಇಕ್ಕಾಟ್ಟಾದ ಮುರುಕಲು ಮನೆಗಳಲ್ಲಿ ವಾಸಿಸಲು ಸಾಧ್ಯವಾಗದೇ ಊರಾಚೆ ಖಾಲಿಯಿದ್ದ ಗೋಮಾಳದ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಹೊಸ ಜೀವನ ಆರಂಭಿಸಿದ್ದರು.<br /> <br /> ಕೆಲವು ವರ್ಷಗಳ ಬಳಿಕ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಈ ಜಾಗ ತನಗೆ ಸೇರಿದ್ದೆಂದು ತಕರಾರು ತೆಗೆದರು. ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಇದಾದ ಕೆಲ ವರ್ಷಗಳ ನಂತರ ವಿವಾದಿತ ಜಾಗದಲ್ಲಿ ನೆಲೆಸಿದ್ದ 30 ಕುಟುಂಬಗಳು ಬೇಸತ್ತು ಊರಿಗೆ ವಾಪಾಸ್ಸಾದರು. ಉಳಿದ 15 ಕುಟುಂಬಗಳು ಇನ್ನೂ ಅಲ್ಲಿಯೇ ಬದುಕುತ್ತಿವೆ.<br /> <br /> ಸೋಗೆ ಜೋಪಡಿ ಹಾಕಿಕೊಂಡು ಗುಡಿಸಲಿನಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ಇಂದಿಗೂ ಸೂರು ಕಾಣದೇ ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿವೆ.<br /> <br /> `ಏಳೆಂಟು ತಿಂಗಳ ಹಿಂದೆಯಷ್ಟೇ ಸಮೀಪದಲ್ಲಿ ಕೊರೆಯಿಸಿದ ಕೊಳವೆಬಾವಿಯಲ್ಲಿ ಒಂದು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೇ ಒತ್ತಬೇಕು, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ' ಎಂದು ನಿವಾಸಿಗಳು ನೊಂದು ನುಡಿಯುತ್ತಾರೆ.<br /> <br /> `ಮಳೆ ಬಂದರೆ ಗುಡಿಸಲುಗಳಲ್ಲಿ ನೀರು ನಿಂತು ನಿದ್ರೆಯಿಲ್ಲದೇ ರಾತ್ರಿಯಿಡಿ ಜಾಗರಾಣೆ ಮಾಡಬೇಕು. ಕೆಲವು ಮನೆಗಳ ಗೋಡೆಗಳು ಮುರಿದು ಬಿದ್ದು ಅಸ್ತಿಪಂಜರದಂತೆ ಕಾಣಿಸುತ್ತಿವೆ. ಹಂದಿಗೂಡಿನಂತಹ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಕೂಗು ಸರ್ಕಾರಕ್ಕೆ ಮುಟ್ಟುತ್ತಿಲ್ಲ' ಎಂದು ದಲಿತ ಮಹಿಳೆಯರು ಕಣ್ಣೀರಿಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಾಥಪುರ:</strong> ಕೊಣನೂರು ಹೋಬಳಿಯ ಕೆಸವತ್ತೂರು ಬಳಿ ನೆಲೆಸಿರುವ 15 ದಲಿತ ಕುಟುಂಬಗಳು ಮೂಲಸೌಲಭ್ಯಗಳೂ ಇಲ್ಲದೆ ಹಲವು ವರ್ಷಗಳಿಂದ ಯಾತನೆಯ ಬದುಕು ಸಾಗಿಸುತ್ತಿವೆ.<br /> <br /> ಹಿಂದೆ ಗ್ರಾಮದ ದಲಿತ ಕಾಲೊನಿಯಲ್ಲಿ ವಾಸವಾಗಿದ್ದ ಸುಮಾರು 45 ಕುಟುಂಬಗಳು 2 ದಶಕಗಳ ಹಿಂದೆ ಅಲ್ಲಿನ ಇಕ್ಕಾಟ್ಟಾದ ಮುರುಕಲು ಮನೆಗಳಲ್ಲಿ ವಾಸಿಸಲು ಸಾಧ್ಯವಾಗದೇ ಊರಾಚೆ ಖಾಲಿಯಿದ್ದ ಗೋಮಾಳದ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಹೊಸ ಜೀವನ ಆರಂಭಿಸಿದ್ದರು.<br /> <br /> ಕೆಲವು ವರ್ಷಗಳ ಬಳಿಕ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಈ ಜಾಗ ತನಗೆ ಸೇರಿದ್ದೆಂದು ತಕರಾರು ತೆಗೆದರು. ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಇದಾದ ಕೆಲ ವರ್ಷಗಳ ನಂತರ ವಿವಾದಿತ ಜಾಗದಲ್ಲಿ ನೆಲೆಸಿದ್ದ 30 ಕುಟುಂಬಗಳು ಬೇಸತ್ತು ಊರಿಗೆ ವಾಪಾಸ್ಸಾದರು. ಉಳಿದ 15 ಕುಟುಂಬಗಳು ಇನ್ನೂ ಅಲ್ಲಿಯೇ ಬದುಕುತ್ತಿವೆ.<br /> <br /> ಸೋಗೆ ಜೋಪಡಿ ಹಾಕಿಕೊಂಡು ಗುಡಿಸಲಿನಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ಇಂದಿಗೂ ಸೂರು ಕಾಣದೇ ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿವೆ.<br /> <br /> `ಏಳೆಂಟು ತಿಂಗಳ ಹಿಂದೆಯಷ್ಟೇ ಸಮೀಪದಲ್ಲಿ ಕೊರೆಯಿಸಿದ ಕೊಳವೆಬಾವಿಯಲ್ಲಿ ಒಂದು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೇ ಒತ್ತಬೇಕು, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ' ಎಂದು ನಿವಾಸಿಗಳು ನೊಂದು ನುಡಿಯುತ್ತಾರೆ.<br /> <br /> `ಮಳೆ ಬಂದರೆ ಗುಡಿಸಲುಗಳಲ್ಲಿ ನೀರು ನಿಂತು ನಿದ್ರೆಯಿಲ್ಲದೇ ರಾತ್ರಿಯಿಡಿ ಜಾಗರಾಣೆ ಮಾಡಬೇಕು. ಕೆಲವು ಮನೆಗಳ ಗೋಡೆಗಳು ಮುರಿದು ಬಿದ್ದು ಅಸ್ತಿಪಂಜರದಂತೆ ಕಾಣಿಸುತ್ತಿವೆ. ಹಂದಿಗೂಡಿನಂತಹ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಕೂಗು ಸರ್ಕಾರಕ್ಕೆ ಮುಟ್ಟುತ್ತಿಲ್ಲ' ಎಂದು ದಲಿತ ಮಹಿಳೆಯರು ಕಣ್ಣೀರಿಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>