<p><strong>ಜಾವಗಲ್:</strong> ಸಮೀಪದ ಕೆರೆಕೋಡಿಹಳ್ಳಿ ಧನಂಜಯ ಪುರಕ್ಕೆ ಹೋಗುವ ರಸ್ತೆಯ ಡಾಂಬರ್ ಕಂಡು ಸಾಕಷ್ಟು ವರ್ಷಗಳಾಗಿವೆ. ಈ ಗ್ರಾಮ ಸಾರಿಗೆ ವ್ಯವಸ್ಥೆಯಿಂದ ವಂಚಿತ ವಾಗಿದೆ. ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಚರಂಡಿ ವ್ಯವಸ್ಥೆ ಹೇಳತೀರದು.<br /> <br /> 400 ಮನೆಗಳಿರುವ ಈ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿ ಇದೆ. ಗ್ರಾಮದೊಳಗೆ ಬೀರಲಿಂಗೇ ಶ್ವರ, ಕರಿಯಮ್ಮ, ತಿಮ್ಮಪ್ಪನ ದೇವಾಲಯಗಳಿವೆ. ಉಳಿದಂತೆ ಸಮಸ್ಯೆಗಳದ್ದೇ ಸಾಮ್ರಾಜ್ಯ.<br /> <br /> ಹಳ್ಳಿಗಳೇ ದೇಶದ ಜೀವನಾಡಿ. ಹಳ್ಳಿ ಉದ್ದಾರವಾ ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ರಾಜಕಾರಣಿ ಗಳ ಮಾತಿಗಷ್ಟೇ ಸೀಮಿತವಾದ ತತ್ವಗಳು. ಹಳ್ಳಿಗಳ ಅಭಿವೃದ್ಧಿಗೆ ಲಕ್ಷಾಂತರ ಹಣ ಬಿಡುಗಡೆಯಾದರೂ ಗ್ರಾಮೀಣ ಪ್ರದೇ ಶದ ಸ್ಥಿತಿ ಸುಧಾರಣೆ ಆಗುತ್ತ್ಲ್ಲಿಲ. <br /> <br /> ಗ್ರಾಮದೊಳಗೆ ಕಾಲಿಟ್ಟ ತಕ್ಷಣ ಚರಂಡಿಯಲ್ಲಿ ಹರಿಯದೆ ಉಳಿದಿರುವ ಕೊಳಚೆ ನೀರು ಗೋಚರಿಸುತ್ತದೆ. ಕೆಲವು ಬಿದಿಗಳಲ್ಲಿ ಚರಂಡಿ ಇದ್ದರೆ ಹೆಚ್ಚಿನವುಗಳಲ್ಲಿ ಇಲ್ಲ. ಹೀಗಾಗಿ ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಗ್ರಾಮದೊಳಗಿರುವ ಕೊಳವೆ ಬಾವಿಯ ಕೈ ಪಂಪುಗಳು ಕೆಟ್ಟು ಹೋಗಿವೆ. ಈ ಗ್ರಾಮ ಬಂದೂರು ಪಂಚಾಯತಿಗೆ ಒಳಪಡುತ್ತದೆ. ಅಧಿಕಾರಿಗಳು ಗ್ರಾಮದೊಳಗೆ ಒಂದು ಬಾರಿ ತಿರುಗಿದರೆ ಗ್ರಾಮದ ಸಮಸ್ಯೆಗಳು ಗೋಚರಿಸುತ್ತವೆ. ಆದರೆ ಯಾರೂ ಬರುತ್ತಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾವಗಲ್:</strong> ಸಮೀಪದ ಕೆರೆಕೋಡಿಹಳ್ಳಿ ಧನಂಜಯ ಪುರಕ್ಕೆ ಹೋಗುವ ರಸ್ತೆಯ ಡಾಂಬರ್ ಕಂಡು ಸಾಕಷ್ಟು ವರ್ಷಗಳಾಗಿವೆ. ಈ ಗ್ರಾಮ ಸಾರಿಗೆ ವ್ಯವಸ್ಥೆಯಿಂದ ವಂಚಿತ ವಾಗಿದೆ. ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಚರಂಡಿ ವ್ಯವಸ್ಥೆ ಹೇಳತೀರದು.<br /> <br /> 400 ಮನೆಗಳಿರುವ ಈ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿ ಇದೆ. ಗ್ರಾಮದೊಳಗೆ ಬೀರಲಿಂಗೇ ಶ್ವರ, ಕರಿಯಮ್ಮ, ತಿಮ್ಮಪ್ಪನ ದೇವಾಲಯಗಳಿವೆ. ಉಳಿದಂತೆ ಸಮಸ್ಯೆಗಳದ್ದೇ ಸಾಮ್ರಾಜ್ಯ.<br /> <br /> ಹಳ್ಳಿಗಳೇ ದೇಶದ ಜೀವನಾಡಿ. ಹಳ್ಳಿ ಉದ್ದಾರವಾ ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ರಾಜಕಾರಣಿ ಗಳ ಮಾತಿಗಷ್ಟೇ ಸೀಮಿತವಾದ ತತ್ವಗಳು. ಹಳ್ಳಿಗಳ ಅಭಿವೃದ್ಧಿಗೆ ಲಕ್ಷಾಂತರ ಹಣ ಬಿಡುಗಡೆಯಾದರೂ ಗ್ರಾಮೀಣ ಪ್ರದೇ ಶದ ಸ್ಥಿತಿ ಸುಧಾರಣೆ ಆಗುತ್ತ್ಲ್ಲಿಲ. <br /> <br /> ಗ್ರಾಮದೊಳಗೆ ಕಾಲಿಟ್ಟ ತಕ್ಷಣ ಚರಂಡಿಯಲ್ಲಿ ಹರಿಯದೆ ಉಳಿದಿರುವ ಕೊಳಚೆ ನೀರು ಗೋಚರಿಸುತ್ತದೆ. ಕೆಲವು ಬಿದಿಗಳಲ್ಲಿ ಚರಂಡಿ ಇದ್ದರೆ ಹೆಚ್ಚಿನವುಗಳಲ್ಲಿ ಇಲ್ಲ. ಹೀಗಾಗಿ ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಗ್ರಾಮದೊಳಗಿರುವ ಕೊಳವೆ ಬಾವಿಯ ಕೈ ಪಂಪುಗಳು ಕೆಟ್ಟು ಹೋಗಿವೆ. ಈ ಗ್ರಾಮ ಬಂದೂರು ಪಂಚಾಯತಿಗೆ ಒಳಪಡುತ್ತದೆ. ಅಧಿಕಾರಿಗಳು ಗ್ರಾಮದೊಳಗೆ ಒಂದು ಬಾರಿ ತಿರುಗಿದರೆ ಗ್ರಾಮದ ಸಮಸ್ಯೆಗಳು ಗೋಚರಿಸುತ್ತವೆ. ಆದರೆ ಯಾರೂ ಬರುತ್ತಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>