ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಶಿವಕುಮಾರ ಬಲಿಗೇರ ಮತ್ತು ಎಸ್.ಎಂ. ಮಲಗೌಡ್ರ ಎಂಬುವರಿಗೆ ಸೇರಿದ ಈರುಳ್ಳಿ ಕಿತ್ತು ಗೂಡು ಹಾಕಿದ್ದು ಕೊಳೆತು ನಾರುತ್ತಿದೆ. ಅಲ್ಲದೇ ಹಸಿ ಮೆಣಸಿನ ಗಿಡಗಳು ತೇವಾಂಶ ಹೆಚ್ಚಾಗಿ ರೋಗಕ್ಕೀಡಾಗಿವೆ. ಹರನಗಿರಿ ಗ್ರಾಮದಲ್ಲಿ ಸೋಮರಡ್ಡಿ ರಾಯರಡ್ಡಿ, ಮಂಜಪ್ಪ ಕುಪ್ಪೇಲೂರ, ನಾಗರಾಜ ಐರಣಿ ಅವರು ಸೇರಿದಂತೆ 40 ಎಕರೆಗೂ ಹೆಚ್ಚು ಭತ್ತದ ಬೆಳೆ ಹಾನಿಗೊಂಡಿದೆ.