ಹಾವೇರಿ: ವಿನಾಶದ ಅಂಚಿನಲ್ಲಿರುವ ಮುಶ್ಯಾಗಳನ್ನು (ಮಂಗ) ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ಬಳಿ ನಡೆದಿದೆ.
ಬಲೆ ಹಾಕಿ ಐದು ಮುಶ್ಯಾಗಳನ್ನು ಸೆರೆಹಿಡಿದ ದುಷ್ಕರ್ಮಿಗಳು, ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಈ ವೇಳೆ ಜನರನ್ನು ಕಂಡು ಸ್ಥಳದಿಂದಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿನಾಲ್ಕು ಜರ್ಕಿನ್, ಬೈಕ್ ಚಾವಿ ಪತ್ತೆಯಾಗಿದ್ದು, ಬೇಟೆಗಾರರು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮುಶ್ಯಾಗಳ ಮಾಂಸ ಭಕ್ಷಿಸುವ ಕೆಲವರು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಈ ಹಿಂದೆಯೂ ಇಂಥ ಘಟನೆಗಳು ಬೆಳಕಿಗೆ ಬಂದಿದ್ದವು.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಮುಶ್ಯಾಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.