<p><strong>ಹಾನಗಲ್:</strong> ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ಭಕ್ಷೀಸ್ ನೋಂದಣಿ ಪತ್ರ ಮಾಡಿಸಿಕೊಂಡ ಬಳಿಕ ತಾಯಿಯ ಪಾಲನೆ ಮಾಡದ ಮಗನಿಂದ ಮರಳಿ ತಾಯಿಗೆ ಆಸ್ತಿಯನ್ನು ಕೊಡುವಂತೆ ಸವಣೂರ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.</p>.<p>ತಾಲ್ಲೂಕಿನ ಆಲದಕಟ್ಟಿ ಗ್ರಾಮದ ಫಕ್ಕೀರವ್ವ ಹನಕನಹಳ್ಳಿ ಎಂಬ ವೃದ್ಧೆ ಸವಣೂರ ಉಪವಿಭಾಗಾಧಿಕಾರಿಗಳಲ್ಲಿ ಮೊರೆ ಹೋಗಿದ್ದರು. ತನ್ನ ಮಗನ ಹೆಸರಿಗೆ ಭಕ್ಷೀಸ್ ಮಾಡಿದ ನೋಂದಾಯಿತ ಪತ್ರವನ್ನು ರದ್ದುಪಡಿಸಲು ಮನವಿ ಮಾಡಿಕೊಂಡಿದ್ದರು.</p>.<p>ವೃದ್ಧೆಯ 8 ಪುತ್ರರ ಪೈಕಿ ಚನ್ನಬಸಪ್ಪ ಎಂಬಾತನ ಹೆಸರಿಗೆ 2011ರಸೆಪ್ಟೆಂಬರ್ 28ರಂದು ಭಕ್ಷೀಸ್ ಪತ್ರವನ್ನು ನೋಂದಣಿ ಮಾಡಿಸಿದ್ದರು. ಆಲದಕಟ್ಟಿ ಗ್ರಾಮದ ವಿ.ಪಿ.ವಿ. ಆಸ್ತಿ ನಂ.285 ಮನೆ ಹಾಗೂ ಖುಲ್ಲಾ ಜಾಗವು ಭಕ್ಷೀಸ್ಪತ್ರದಲ್ಲಿ ನಮೂದಿತ ಆಸ್ತಿಯಾಗಿತ್ತು.</p>.<p>ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರು ವೃದ್ಧೆಯ ಪರವಾಗಿ ಆದೇಶ ನೀಡಿದ್ದಾರೆ. ಭಕ್ಷಿಸ್ ಪತ್ರ ರದ್ದುಪಡಿಸಲು ಸೂಚಿಸಿದ್ದಾರೆ.</p>.<p>ಫಕ್ಕೀರವ್ವ ಹನಕನಹಳ್ಳಿ ಹೆಸರಿಗೆ ಆದಲಕಟ್ಟಿ ಗ್ರಾಮದ ಜಮೀನುಗಳ ಹಕ್ಕು ಪುನರ್ ದಾಖಲಿಸಲು ಉಪ ನೊಂದಣಾಧಿಕಾರಿಗೆ ಸೂಚಿಸಿದ್ದಾರೆ. ನೋಂದಣಿ ಆಧಾರದಂತೆ ಖಾತೆ ಬದಲಾವಣೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.</p>.<p>ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯ ಅಧ್ಯಕ್ಷರು ಆಗಿರುವ ಸವಣೂರ ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರ ಆದೇಶ ಪ್ರತಿ ಇದೇ ತಿಂಗಳು 20ರಂದು ವೃದ್ಧೆ ಫಕ್ಕೀರವ್ವ ಅವರ ಕೈಸೇರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ಭಕ್ಷೀಸ್ ನೋಂದಣಿ ಪತ್ರ ಮಾಡಿಸಿಕೊಂಡ ಬಳಿಕ ತಾಯಿಯ ಪಾಲನೆ ಮಾಡದ ಮಗನಿಂದ ಮರಳಿ ತಾಯಿಗೆ ಆಸ್ತಿಯನ್ನು ಕೊಡುವಂತೆ ಸವಣೂರ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.</p>.<p>ತಾಲ್ಲೂಕಿನ ಆಲದಕಟ್ಟಿ ಗ್ರಾಮದ ಫಕ್ಕೀರವ್ವ ಹನಕನಹಳ್ಳಿ ಎಂಬ ವೃದ್ಧೆ ಸವಣೂರ ಉಪವಿಭಾಗಾಧಿಕಾರಿಗಳಲ್ಲಿ ಮೊರೆ ಹೋಗಿದ್ದರು. ತನ್ನ ಮಗನ ಹೆಸರಿಗೆ ಭಕ್ಷೀಸ್ ಮಾಡಿದ ನೋಂದಾಯಿತ ಪತ್ರವನ್ನು ರದ್ದುಪಡಿಸಲು ಮನವಿ ಮಾಡಿಕೊಂಡಿದ್ದರು.</p>.<p>ವೃದ್ಧೆಯ 8 ಪುತ್ರರ ಪೈಕಿ ಚನ್ನಬಸಪ್ಪ ಎಂಬಾತನ ಹೆಸರಿಗೆ 2011ರಸೆಪ್ಟೆಂಬರ್ 28ರಂದು ಭಕ್ಷೀಸ್ ಪತ್ರವನ್ನು ನೋಂದಣಿ ಮಾಡಿಸಿದ್ದರು. ಆಲದಕಟ್ಟಿ ಗ್ರಾಮದ ವಿ.ಪಿ.ವಿ. ಆಸ್ತಿ ನಂ.285 ಮನೆ ಹಾಗೂ ಖುಲ್ಲಾ ಜಾಗವು ಭಕ್ಷೀಸ್ಪತ್ರದಲ್ಲಿ ನಮೂದಿತ ಆಸ್ತಿಯಾಗಿತ್ತು.</p>.<p>ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರು ವೃದ್ಧೆಯ ಪರವಾಗಿ ಆದೇಶ ನೀಡಿದ್ದಾರೆ. ಭಕ್ಷಿಸ್ ಪತ್ರ ರದ್ದುಪಡಿಸಲು ಸೂಚಿಸಿದ್ದಾರೆ.</p>.<p>ಫಕ್ಕೀರವ್ವ ಹನಕನಹಳ್ಳಿ ಹೆಸರಿಗೆ ಆದಲಕಟ್ಟಿ ಗ್ರಾಮದ ಜಮೀನುಗಳ ಹಕ್ಕು ಪುನರ್ ದಾಖಲಿಸಲು ಉಪ ನೊಂದಣಾಧಿಕಾರಿಗೆ ಸೂಚಿಸಿದ್ದಾರೆ. ನೋಂದಣಿ ಆಧಾರದಂತೆ ಖಾತೆ ಬದಲಾವಣೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.</p>.<p>ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯ ಅಧ್ಯಕ್ಷರು ಆಗಿರುವ ಸವಣೂರ ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರ ಆದೇಶ ಪ್ರತಿ ಇದೇ ತಿಂಗಳು 20ರಂದು ವೃದ್ಧೆ ಫಕ್ಕೀರವ್ವ ಅವರ ಕೈಸೇರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>