ಅಂತೆ-ಕಂತೆಗಳ ಜಾಡು ಹಿಡಿದು ಹೊರಟರೆ ಇವು ಸತ್ಯ ಘಟನೆಗಳು ಎಂಬುದು ದೇವಸ್ಥಾನದ ಈಗಿನ ಅರ್ಚಕ ಪೂಜಾರ ಅವರ ಅನಿಸಿಕೆ. ಇಂತಹ ವಿಶಿಷ್ಟ ಹಿನ್ನೆಲೆ ಹೊಂದಿರುವ ದೇವಸ್ಥಾನ ಜೀರ್ಣಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂತನ ದೇವಸ್ಥಾನ ನಿರ್ಮಿಸಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇಲ್ಲಿ ಶ್ರಾವಣ ಮಾಸದ ಪ್ರತಿ ಶನಿವಾರ ಭಕ್ತರ ಜಾತ್ರೆಯೇ ನೆರವೇರುತ್ತದೆ. ಪಲ್ಲಕ್ಕಿ ಉತ್ಸವ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.