‘ಸುರಕ್ಷತೆಗೆ ಆದ್ಯತೆ ನೀಡಿ’

ಸವಣೂರ: ಕೋವಿಡ್ ಪರಿಣಾಮ ಬಂದ್ ಆಗಿದ್ದ ಶಾಲೆಗಳು ಹಾಗೂ ಅಂಗನವಾಡಿಗಳು ಈಗ ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಶಾಲೆಗಳಲ್ಲಿ ಜೀವಕಳೆ ಬಂದಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಅನಿಲಕುಮಾರ ಹೊಂಬಳದ ಹೇಳಿದರು.
ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಜರುಗಿದ ಅಂಗನವಾಡಿ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿ ಮಾತನಾಡಿದರು. ಕೋವಿಡ್ ಸಾಂಕ್ರಾಮಿಕ ರೋಗ ಕಡಿಮೆಯಾಗಿದೆ ಎಂದು ನಿಷ್ಕಾಳಜಿ ತೋರಬಾರದು. ಮುಂಜಾಗೃತ ಕ್ರಮ ವಹಿಸಿ ಮಕ್ಕಳ ಆರೋಗ್ಯವನ್ನು ಕಾಯ್ದುಕೊಂಡು ಶಿಕ್ಷಣ ನೀಡಲು ಮುಂದಾಗಬೇಕು. ಆಹಾರ ವಿತರಣೆ ಪೂರ್ವದಲ್ಲಿ ಶಿಕ್ಷಕರು ಗುಣಮಟ್ಟವನ್ನು ಪರೀಕ್ಷೆಮಾಡಿ ಉಣಬಡಿಸಬೇಕು ಎಂದು ಕಿವಿ ಮಾತು ನೀಡಿದರು.
ಶಿಕ್ಷಕ ವಿ.ಬಿ.ದೋಂಗಡೆ ಮಾತನಾಡಿ, ಮಕ್ಕಳ ಆರೋಗ್ಯದ ಜೋತೆಗೆ ಗುಣಮಟ್ಟದ ಶಿಕ್ಷಣ ಮುಂದುವರಿಯಲು ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ನಿರ್ದೇಶನದಂತೆ ಸುರಕ್ಷತಾ ಕ್ರಮ ಕೈಗೊಂಡು ಶಿಕ್ಷಣ ನೀಡಬೇಕು ಎಂದರು.
ಗ್ರಾ.ಪಂ. ಸದಸ್ಶರಾದ ಗಂಗಪ್ಪ ದೊಡ್ಡಪೂಜಾರ, ಶಿಕ್ಷಕರಾದ ಮಂಜುನಾಥ ವಾಲ್ಮೀಕಿ, ಯುವ ಮುಖಂಡ ಗಂಗಪ್ಪ ಅಜ್ಜಣ್ಣನವರ, ಅಂಗನವಾಡಿ ಕಾರ್ಯಕರ್ತೆ ಭಾರತಿ ಮಾಸಲವಾಡ, ಸಹಾಯಕ ಕಾರ್ಯಕರ್ತೆ ಅಕ್ಕಮ್ಮ ತಳವಾರ, ಆಶಾ ಕಾರ್ಯಕರ್ತೆಯರಾದ ಗಂಗಮ್ಮ ಸಣ್ಣಪೂಜಾರ, ಚನ್ನಮ್ಮ ಗೌರಣ್ಣನವರ, ಗ್ರಾ.ಪಂ ಸಿಬ್ಬಂದಿ ಬಿ.ಎಸ್.ಅತ್ತಿಗೇರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.