ಸೋಮವಾರ, 28 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಏರಿ ಒಡೆದು ಕೆರೆ ಖಾಲಿ: ಜಮೀನಿಗೆ ನುಗ್ಗಿದ ನೀರು

Published : 26 ಜುಲೈ 2025, 3:00 IST
Last Updated : 26 ಜುಲೈ 2025, 3:00 IST
ಫಾಲೋ ಮಾಡಿ
Comments
2024ರಲ್ಲಿ ನಡೆಸಿದ್ದ ಕಾಮಗಾರಿ ಕಳಪೆಯಾಗಿದ್ದರಿಂದ ಏರಿ ಒಡೆದಿದೆ. ತಪ್ಪಿತಸ್ಥ ಗುತ್ತಿಗೆದಾರ–ಎಂಜಿನಿಯರ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು ಅತ್ತಿಕಟ್ಟೆ ಗ್ರಾಮಸ್ಥರು
ಸೇತುವೆ ಭಾಗಶಃ ಮುಳುಗಡೆ
ಜಿಲ್ಲೆಯಲ್ಲಿ ಬಿಡುವು ನೀಡುತ್ತಲೇ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಹಾವೇರಿ ತಾಲ್ಲೂಕಿನ ಕರ್ಜಗಿ ಹಾಗೂ ಚಿಕ್ಕಮಗದೂರು ಗ್ರಾಮದ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಶುಕ್ರವಾರ ಭಾಗಶಃ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟದ ಜಿಲ್ಲೆಯಲ್ಲಿ ಮಳೆ ನೀರಾಗುತ್ತಿದೆ. ಅದೇ ನೀರು ವರದಾ ನದಿ ಮೂಲಕ ಜಿಲ್ಲೆಯಲ್ಲಿ ಹರಿಯುತ್ತಿದೆ. ಇದೇ ವರದಾ ನದಿಗೆ ಅಡ್ಡವಾಗಿ ಕರ್ಜಗಿ–ಚಿಕ್ಕಮಗದೂರು ನಡುವೆ ಕಿರು ಸೇತುವೆ ನಿರ್ಮಿಸಲಾಗಿದೆ. ವರದಾ ನದಿಯಲ್ಲಿ ನೀರು ಹೆಚ್ಚಳವಾಗಿದ್ದು ಸೇತುವೆ ಭಾಗಶಃ ಜಲಾವೃತಗೊಂಡಿದೆ. ಸೇತುವೆಯಲ್ಲಿ ನೀರು ಹರಿಯುತ್ತಿದ್ದ ಸಂದರ್ಭದಲ್ಲಿಯೇ ಕೆಲವರು ಬೈಕ್‌ಗಳಲ್ಲಿ ಸಂಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT