ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆಗಳಲ್ಲಿ ಹಣ, ಹೆಂಡ, ಸೀರೆ ಅಥವಾ ಇತರೆ ಆಮಿಷಗಳನ್ನು ಒಡ್ಡದೆ, ಜಾತಿ ರಾಜಕಾರಣವನ್ನು ಮಾಡದೆ, ಉತ್ತಮ ಆಡಳಿತ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ನಾಲ್ವರು ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ವರಿಷ್ಠರು ಚರ್ಚಿಸಿ, ಉತ್ತಮ ಅಭ್ಯರ್ಥಿಯನ್ನು ಶೀಘ್ರ ಕಣಕ್ಕಿಳಿಸುತ್ತೇವೆ ಎಂದರು.