ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರದ ಅಭಿವೃದ್ಧಿಗೆ ಬದ್ಧ’

Last Updated 9 ಜನವರಿ 2021, 15:53 IST
ಅಕ್ಷರ ಗಾತ್ರ

ಹಾವೇರಿ: ‘ನಗರದ ಅಭಿವೃದ್ಧಿಗೆ ನಗರ ನಿವಾಸಿಗರ ಕಾಳಜಿ ಹಾಗೂ ಸಹಕಾರ ಅಗತ್ಯವಾಗಿದೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಇಲ್ಲಿನ ಮೆಹಬೂಬ ನಗರದಲ್ಲಿ ನೂತನವಾಗಿ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ಮೆಹಬೂಬ ನಗರದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಗರದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ, ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ಮೂಲಸೌಲಭ್ಯ ಒದಗಿಸಿ ಸುಂದರ ನಗರವನ್ನಾಗಿ ಮಾಡಲು ಬದ್ದನಾಗಿದ್ದೇನೆ. ನಗರದ ನಿವಾಸಿಗರು ಸಹಕಾರ ನೀಡಬೇಕು ಹಾಗೂ ಸಮಸ್ಯೆಗಳನ್ನು ಗಮನಕ್ಕೆ ತರಲು ಪ್ರಯತ್ನಿಸಿದಾಗ ಪರಿಹಾರ ಹುಡುಕಲು ಸಾಧ್ಯವಾಗಲಿದೆ. ಮೆಹಬೂಬ ನಗರದಲ್ಲಿ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದು, ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಮುಖಂಡರಾದ ಈರಣ್ಣ ಸಂಗೂರ, ಪರಶುರಾಮ ಹರ್ಲಾಪುರ, ಶಿವರಾಜ ಮತ್ತಿಹಳ್ಳಿ, ನಜೀರಸಾಬ ನದಾಫ, ಅಡಿವೆಪ್ಪ ಯಲವಿಗಿಮಠ, ಹಜರತ ಅಲಿ ಶೇಕಸನದಿ, ಇಶುಫ್ ಹುಲಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT