ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಜಗದೀಶ ವೀರಪ್ಪ ಬಣಕಾರ ಅವರಿಗೆ ₹91,868, ವೀರಪ್ಪ ರುದ್ರಪ್ಪ ಬಣಕಾರ ಅವರಿಗೆ ₹1,46,332 ಹಾಗೂ ಶಾರದಾ ವೀರಪ್ಪ ಬಣಕಾರ ಅವರಿಗೆ ₹53,480ಗಳನ್ನು ವಾರ್ಷಿಕ ಶೇ 6ರ ಬಡ್ಡಿಯಂತೆ ಪ್ರಕರಣ ದಾಖಲಾದ ದಿನದಿಂದ ಆದೇಶವರೆಗೆ ನೀಡಬೇಕು. ಪ್ರತಿಯೊಬ್ಬರಿಗೂ ಮಾನಸಿಕ ವ್ಯಥ್ಯೆಗಾಗಿ ₹2 ಸಾವಿರ ಹಾಗೂ ಪ್ರಕರಣದ ಖರ್ಚಿಗಾಗಿ ₹1 ಸಾವಿರ ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.