ಹಾವೇರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ದುಂಡಿಬಸವೇಶ್ವರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇಜಾರಿಲಕಮಾಪುರದ ಜೆಬಿಎಂ ಕ್ರಿಕೆಟ್ ಕ್ಲಬ್ ‘ಚಾಂಪಿಯನ್ ತಂಡ’ವಾಗಿ ಹೊರಹೊಮ್ಮಿತು.
ಚಾಂಪಿಯನ್ ತಂಡಕ್ಕೆ ₹33,333 ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು. ಹಾವೇರಿಯ ‘ಆಟೊ ಶಂಕರ್ ತಂಡ’ ‘ರನ್ನರ್ ಅಪ್’ ಆಗಿ ₹22,222 ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
‘ಆಟೊ ಶಂಕರ್’ ತಂಡದ ನಾಯಕ ರಾಮು ಮಾಳಗಿ ಅವರು ‘ಬೆಸ್ಟ್ ಬೌಲರ್’ ಬಹುಮಾನ ಪಡೆದರು. ಟೌಕಿರ್ ಬ್ಯಾಡಗಿ ಅವರು ‘ಬೆಸ್ಟ್ ಆಲ್ರೌಂಡರ್’ ಹಾಗೂ ದಿಲೀಪ್ ಹರವಿ ಅವರು ‘ಬೆಸ್ಟ್ ಬ್ಯಾಟ್ಸ್ಮನ್’ ಬಹುಮಾನವನ್ನು ತನ್ನದಾಗಿಸಿಕೊಂಡರು.