<p><strong>ತಡಸ:</strong> ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ಗುರುವಾರ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕಂದಾಯ ಇಲಾಖೆ ಕಟ್ಟಡಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.</p>.<p>ರೈತ ಮುಖಂಡ ಈಶ್ವರ್ ಗೌಡ ಪಾಟೀಲ್ ಮಾತನಾಡಿ, ‘ಸತತವಾಗಿ ಸುರಿಯುತ್ತಿರುವ ಮಳೆಗೆ ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳು ಜಲಾವೃತವಾಗಿದ್ದು, ರೈತರಿಗೆ ಬೆಳೆ ಹಾನಿ ಹಾಗೂ ಬೆಳೆ ವಿಮೆಯನ್ನು ಎಂಟತ್ತು ದಿನದಲ್ಲಿ ಅಧಿಕಾರಿಗಳು ಹಾಕಿಸುವ ಕಾರ್ಯ ಮಾಡಲಿ. ಇಲ್ಲವಾದರೆ ನವೆಂಬರ್ 4ರಂದು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಬೀಗ ಹಾಕಿ ತಡಸ ಹಾನಗಲ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.</p>.<p>ನಂತರ ಮಾತನಾಡಿದ ವಿರುಪಾಕ್ಷಗೌಡ ಪಾಟೀಲ್, ‘ಅಪಾರ ಪ್ರಮಾಣದ ಮಳೆಗೆ ಬೆಳೆಗಳು ಹಾಳಾಗಿದ್ದು ಕೃಷಿ ಇಲಾಖೆ ತೋಟಗಾರಿ ಇಲಾಖೆ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಗ್ರಾಮಗಳಿಗೆ ಹಾಗೂ ರೈತರ ಜಮೀನಿಗೆ ಹೋಗಿ ಜಂಟಿ ಸರ್ವೆ ಮಾಡಿ ನೈಜ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಎಲ್ಲಾ ರೈತರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಲಿ’ ಎಂದು ಆಗ್ರಹಿಸಿದರು.</p>.<p>ರೈತ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಸಮಗೊಂಡ ಮಾತನಾಡಿ, ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡುತ್ತೇವೆಂದು ಅಧಿಕಾರಿಗಳು ಹೇಳಿ ಎಂಟತ್ತು ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.</p>.<p>ಉಪ ತಹಶೀಲ್ದಾರ್ ಕೆ.ಎಚ್. ತಳವಾರ ಹಾಗೂ ಕೃಷಿ ಇಲಾಖೆ ಆತ್ಮ ವಿಭಾಗದ ರಾಜು ಜಂಗ್ಲೆಪ್ನವರ ಮನವಿ ಸ್ವೀಕರಿಸಿದರು.</p>.<p>ರೈತರಾದ ಬಾಹುಬಲಿ ಧರಣಿಪ್ಪನವರ, ಕಾಂತಪ್ಪ ಕೂಳೂರು, ತಿಪ್ಪಣ್ಣ ಸುಣಗಾರ, ಬಾಬುಲಾಲ್ ತಡಸ, ಹನುಮಂತಪ್ಪ ಶ್ಯಾಡಂಬಿ, ಶಿವಪುತ್ರಯ್ಯ ಪೂಜಾರ, ಮಹಾಂತೇಶ್ ಹುರಳಿಕುಪ್ಪಿ, ಸಂಗಪ್ಪ ಹರಕುಣಿ, ಈರಪ್ಪ ಬೆಂಡಲಗಟ್ಟಿ, ಶಿವಾನಂದ ಜಡಿಮಠ, ಕಲ್ಲಪ್ಪ ಬಿರೊಳ್ಳಿ, ನಿಂಗಪ್ಪ ದೊಡ್ಡಮನಿ, ಡಾಕಪ್ಪಾ ಲಮಾಣಿ, ಈರಣ್ಣ ಮಾಳೋಜಿನವರ್, ದಣಪಾಲ ಕೊಳುರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ:</strong> ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ಗುರುವಾರ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕಂದಾಯ ಇಲಾಖೆ ಕಟ್ಟಡಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.</p>.<p>ರೈತ ಮುಖಂಡ ಈಶ್ವರ್ ಗೌಡ ಪಾಟೀಲ್ ಮಾತನಾಡಿ, ‘ಸತತವಾಗಿ ಸುರಿಯುತ್ತಿರುವ ಮಳೆಗೆ ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳು ಜಲಾವೃತವಾಗಿದ್ದು, ರೈತರಿಗೆ ಬೆಳೆ ಹಾನಿ ಹಾಗೂ ಬೆಳೆ ವಿಮೆಯನ್ನು ಎಂಟತ್ತು ದಿನದಲ್ಲಿ ಅಧಿಕಾರಿಗಳು ಹಾಕಿಸುವ ಕಾರ್ಯ ಮಾಡಲಿ. ಇಲ್ಲವಾದರೆ ನವೆಂಬರ್ 4ರಂದು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಬೀಗ ಹಾಕಿ ತಡಸ ಹಾನಗಲ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.</p>.<p>ನಂತರ ಮಾತನಾಡಿದ ವಿರುಪಾಕ್ಷಗೌಡ ಪಾಟೀಲ್, ‘ಅಪಾರ ಪ್ರಮಾಣದ ಮಳೆಗೆ ಬೆಳೆಗಳು ಹಾಳಾಗಿದ್ದು ಕೃಷಿ ಇಲಾಖೆ ತೋಟಗಾರಿ ಇಲಾಖೆ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಗ್ರಾಮಗಳಿಗೆ ಹಾಗೂ ರೈತರ ಜಮೀನಿಗೆ ಹೋಗಿ ಜಂಟಿ ಸರ್ವೆ ಮಾಡಿ ನೈಜ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಎಲ್ಲಾ ರೈತರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಲಿ’ ಎಂದು ಆಗ್ರಹಿಸಿದರು.</p>.<p>ರೈತ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಸಮಗೊಂಡ ಮಾತನಾಡಿ, ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡುತ್ತೇವೆಂದು ಅಧಿಕಾರಿಗಳು ಹೇಳಿ ಎಂಟತ್ತು ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.</p>.<p>ಉಪ ತಹಶೀಲ್ದಾರ್ ಕೆ.ಎಚ್. ತಳವಾರ ಹಾಗೂ ಕೃಷಿ ಇಲಾಖೆ ಆತ್ಮ ವಿಭಾಗದ ರಾಜು ಜಂಗ್ಲೆಪ್ನವರ ಮನವಿ ಸ್ವೀಕರಿಸಿದರು.</p>.<p>ರೈತರಾದ ಬಾಹುಬಲಿ ಧರಣಿಪ್ಪನವರ, ಕಾಂತಪ್ಪ ಕೂಳೂರು, ತಿಪ್ಪಣ್ಣ ಸುಣಗಾರ, ಬಾಬುಲಾಲ್ ತಡಸ, ಹನುಮಂತಪ್ಪ ಶ್ಯಾಡಂಬಿ, ಶಿವಪುತ್ರಯ್ಯ ಪೂಜಾರ, ಮಹಾಂತೇಶ್ ಹುರಳಿಕುಪ್ಪಿ, ಸಂಗಪ್ಪ ಹರಕುಣಿ, ಈರಪ್ಪ ಬೆಂಡಲಗಟ್ಟಿ, ಶಿವಾನಂದ ಜಡಿಮಠ, ಕಲ್ಲಪ್ಪ ಬಿರೊಳ್ಳಿ, ನಿಂಗಪ್ಪ ದೊಡ್ಡಮನಿ, ಡಾಕಪ್ಪಾ ಲಮಾಣಿ, ಈರಣ್ಣ ಮಾಳೋಜಿನವರ್, ದಣಪಾಲ ಕೊಳುರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>