ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರ್ ವಾಹನ ನಿರೀಕ್ಷಕ ಪಿ.ಎಸ್ ಹಿರೇಮಠ ಮಾತನಾಡಿ, ವಾಯು ಮಾಲಿನ್ಯ, ಕಲಬೆರಕೆ ಇಂಧನ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬೀದಿನಾಟಕ, ಜನಪದ ಸಂಗೀತ, ಎಲ್.ಇ.ಡಿ. ವಾಹನದ ಮೂಲಕ ಜಾಗೃತಿ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಪರಿಸರ ಜಾಗೃತಿ ಕರಪತ್ರಗಳ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.