‘8 ಎಕರೆ 23 ಗುಂಟೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕಟಾವು ಮಾಡಿದ ನಂತರ ಹೊಲದಲ್ಲೇ ಒಣಗಿ ಹಾಕಿದ್ದೆವು. ಹೊಲದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಶವಾಗಿ ಶೇ 90ರಷ್ಟು ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ಅಂದಾಜು ₹2 ಲಕ್ಷ ನಷ್ಟವಾಗಿದೆ’ ಎಂದುಗ್ರಾಮದ ರುದ್ರಪ್ಪ ಓಂಕಾರಣ್ಣ ಅಳಲು ತೋಡಿಕೊಂಡರು.