ಕಳೆದ ಶನಿವಾರ ತಾಲ್ಲೂಕಿನ ಮಂತಗಿ, ಕಾಮನಹಳ್ಳಿ ಅರಣ್ಯ ಪರಿಸರದಲ್ಲಿ ಪ್ರತ್ಯಕ್ಷವಾಗಿದ್ದ ನಾಲ್ಕು ಆನೆಗಳು, ಕಳೆದ ಮೂರು ದಿನಗಳಿಂದ ವ್ಯಾಪ್ತಿ ಬದಲಿಸಿವೆ. ತಾಲ್ಲೂಕಿನ ಶಿರಗೋಡ, ಕ್ಯಾಸನೂರ, ಕೋಣನಕೊಪ್ಪ, ಹಿರೇಕಾಂಶಿ ಮತ್ತು ಗೊಂದಿ ಅರಣ್ಯ ಪ್ರದೇಶದಲ್ಲಿ ದಾಂಗುಡಿ ಇಟ್ಟಿವೆ. ಭತ್ತ, ಕಬ್ಬು, ಅಡಕೆ, ಬಾಳೆ ತೋಟಗಳನ್ನು ನಾಶ ಮಾಡಿವೆ.