ಕಾರ್ಖಾನೆಗಳಿಂದ ಕಾರ್ಮಿಕರ ಕೊರತೆ ನೆಪ: ಕಬ್ಬು ಕಟಾವಿಗೆ ರೈತರ ಪರದಾಟ
ಪುಟ್ಟಪ್ಪ ಲಮಾಣಿ
Published : 24 ನವೆಂಬರ್ 2023, 6:57 IST
Last Updated : 24 ನವೆಂಬರ್ 2023, 6:57 IST
ಫಾಲೋ ಮಾಡಿ
Comments
ಕುನ್ನೂರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಕಾರ್ಮಿಕರು
ಸಾಗಣೆ ವೆಚ್ಚ; ರೈತರಿಗೆ ನಷ್ಟ
ವಿಐಎನ್ಪಿ ಕಾರ್ಖಾನೆಯು ಜಿಲ್ಲೆಯ ವಿವಿಧೆಡೆ ಹಾಗೂ ಕಾರ್ಖಾನೆಯ ಅಕ್ಕಪಕ್ಕದ ಹಳ್ಳಿಗಳಿಂದಲೂ ಕಬ್ಬು ಖರೀದಿಸುತ್ತಿದೆ. ಆದರೆ ಎಲ್ಲರಿಗೂ ಒಂದೇ ರೀತಿಯಾಗಿ ಸಾಗಣೆ ವೆಚ್ಚ ಕಡಿತ ಮಾಡುತ್ತಿದೆ. ಇದರಿಂದ ಕಾರ್ಖಾನೆ ಸುತ್ತಲಿನ ಹಳ್ಳಿಗಳ ರೈತರಿಗೆ ಅನ್ಯಾಯವಾಗುತ್ತಿದೆ. 1 ಟನ್ಗೆ ₹80ರಿಂದ ₹100 ನಷ್ಟವಾಗುತ್ತಿದೆ. ಸಾಗಣೆಯಲ್ಲಿ ಆಗುತ್ತಿರುವ ತಾರತಮ್ಮ ಸರಿಪಡಿಸಿ ಕನಿಷ್ಠ ದರ ನಿಗದಿಪಡಿಸಬೇಕು. ಸಕಾಲಕ್ಕೆ ಕಬ್ಬು ಕಟಾವು ಮಾಡಬೇಕು ಎಂದು ರೈತ ರುದ್ರಪ್ಪ ಕರಡಿ ಆಗ್ರಹಿಸಿದ್ದಾರೆ. ಕಾರ್ಖಾನೆ ಘೋಷಿಸಿರುವ ದರ ಅಂತಿಮವಲ್ಲ! ವಿಐಎನ್ಪಿ ಕಾರ್ಖಾನೆ ವತಿಯಿಂದ ಘೋಷಿಸಿರುವ ದರ ಅಂತಿಮವಲ್ಲ. ಬೇರೆ ಕಾರ್ಖಾನೆಯವರು ಯಾವ ದರ ನೀಡುತ್ತಾರೆ ಎನ್ನುವುದನ್ನು ಆಡಳಿತ ಮಂಡಳಿ ಗಮನಿಸುತ್ತಿದೆ. ಅವರು ಹೆಚ್ಚುವರಿ ದರ ನೀಡಿದರೆ ನಾವು ನೀಡಬೇಕಾಗುತ್ತದೆ. ಈಗ ನಮ್ಮ ಕಾರ್ಖಾನೆ ಕಬ್ಬು ಸಾಗಣೆ ಮತ್ತು ಕಟಾವು ವೆಚ್ಚವಾಗಿ ಸರಾಸರಿ ₹750 ದರ ನಿಗದಿ ಮಾಡಿದೆ. 1 ಟನ್ಗೆ ₹2415 ನೀಡಲಾಗುತ್ತಿದೆ ಎನ್ನುತ್ತಾರೆ ವಿಐಎನ್ಎಪಿ ಸಕ್ಕರೆ ಕಾರ್ಖಾನೆ ಕೋಣನಕೇರಿ ಎಂಡಿ ಬಸವನಗೌಡ ಪಾಟೀಲ. 1 ಟನ್ಗೆ ₹3073 ದರ ನಿಗದಿ ವಿಐಎನ್ಪಿ ಕಾರ್ಖಾನೆಗೆ ಒಂದು ಟನ್ ಕಬ್ಬಿಗೆ ₹3073 ಎಫ್ಆರ್ಪಿ ನಿಗದಿಯಾಗಿದೆ . ಇದರಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ₹750 ಕಡಿತವಾಗುತ್ತಿದೆ. ಕಾರ್ಖಾನೆ ಹೆಚ್ಚುರಿಯಾಗಿ ₹92 ಸೇರಿಸಿ ರೈತರಿಗೆ ₹2415 ಪಾವತಿಸುತ್ತಿದೆ. ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಳಿಯಾಳ ₹3678 ಮಲಪ್ರಭಾ ಶುಗರ್ಸ್ ₹3168 ರೇಣುಕಾ ಶುಗರ್ಸ್ ಮುನವಳ್ಳಿ ₹3773 ದಾವಣಗೆರೆ ಶುಗರ್ಸ್ ₹2970 ವಿಜಯನಗರ ಶುಗರ್ಸ್ ₹2920 ಜೆಎಂ ಶುಗರ್ಸ್ ಸಂಗೂರ ಹಾವೇರಿ ₹2923 ನಿದಿಯಾಗಿದೆ.