ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವೋಟು, ನೋಟು ಮತ್ತು ರೊಟ್ಟಿ ಎಂಬ ಮೂರು ಜೋಳಿಗೆಗಳನ್ನು ಹಿಡಿದು ಪ್ರಚಾರ ಕೈಗೊಳ್ಳುತ್ತೇವೆ. ರೈತ ಸಂಘದವರನ್ನು ಬೆಂಬಲಿಸಿ ಜನರು ನೀಡುವ ರೊಟ್ಟಿಗಳಿಂದ ನಮಗೆ ಎಷ್ಟು ಮತಗಳು ಸಿಗುತ್ತವೆ ಎಂಬುದು ಖಾತ್ರಿಯಾಗುತ್ತದೆ. ಜನರು ನೀಡುವ ಕಾಸಿನಿಂದ ಪ್ರಚಾರ ಕಾರ್ಯ ನಡೆಸುತ್ತೇವೆ ಎಂದು ಹೇಳಿದರು.