<p><strong>ಹಾವೇರಿ</strong>: ಬೆಂಗಳೂರಿನಿಂದ ಧಾರವಾಡಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಫ್ಲಿಪ್ಕಾರ್ಟ್ ಕಂಪನಿಗೆ ಸೇರಿದ ₹ 24.91 ಲಕ್ಷ ಮೌಲ್ಯದ ಮೊಬೈಲ್ಗಳ ಕಳವು ಪ್ರಕರಣದ ಸಂಬಂಧ ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಫ್ಲಿಪ್ಕಾರ್ಟ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.</p>.<p>‘ಜಿಲ್ಲೆಯ ಕಾಕೋಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ. 1ರಂದು ಹೊರಟಿದ್ದ ಲಾರಿಯ ಬಾಗಿಲಿನ ಬೀಗವನ್ನು ಸಿನಿಮೀಯ ರೀತಿಯಲ್ಲಿ ತೆರೆದು, ಮೊಬೈಲ್ಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳಿದ್ದ 6 ಬಾಕ್ಸ್ಗಳನ್ನು ಕಳವು ಮಾಡಲಾಗಿದೆ’ ಎಂದು ಲಾರಿ ಚಾಲಕ ಮಲಿಕಜಾನ್ ಮುಲ್ಲಾ ಅವರು ಠಾಣೆಗೆ ದೂರು ನೀಡಿದ್ದಾರೆ.</p>.<p>‘ಕಳವು ಬಗ್ಗೆ ಚಾಲಕ ದೂರು ನೀಡಿದ್ದು, ವಸ್ತುಗಳ ಬಗ್ಗೆ ಫ್ಲಿಪ್ಕಾರ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಯಾವ ವಸ್ತುಗಳು ಕಳುವಾಗಿವೆ? ಮೊಬೈಲ್ಗಳ ಐಎಂಇಐ ಸಂಖ್ಯೆ ಏನು ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಐಎಂಇಐ ಸಿಕ್ಕರೆ, ಮೊಬೈಲ್ಗಳ ಸುಳಿವು ಸಿಗುತ್ತದೆ’ ಎಂದು ಪೊಲೀಸರು ಹೇಳಿದರು.</p>.<p>‘ಸರಕು ಸಾಗಣೆ ವಾಹನಗಳಲ್ಲಿ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಲಾರಿಯಲ್ಲಿ ಅಳವಡಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ಲಾರಿ ನಿಂತಿತ್ತು. ಆದರೆ, ಕಾಕೋಳ ಬಳಿಯೇ ಬಾಗಿಲು ತೆರೆದಿರುವುದಾಗಿ ಕಂಪನಿಯ ತಾಂತ್ರಿಕ ವಿಭಾಗ ತಿಳಿಸಿದೆ. ಸತ್ಯಾಸತ್ಯತೆ ಪತ್ತೆಗೆ ತನಿಖೆ ನಡೆಸಿದ್ದೇವೆ’ ಎಂದರು.</p>
<p><strong>ಹಾವೇರಿ</strong>: ಬೆಂಗಳೂರಿನಿಂದ ಧಾರವಾಡಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಫ್ಲಿಪ್ಕಾರ್ಟ್ ಕಂಪನಿಗೆ ಸೇರಿದ ₹ 24.91 ಲಕ್ಷ ಮೌಲ್ಯದ ಮೊಬೈಲ್ಗಳ ಕಳವು ಪ್ರಕರಣದ ಸಂಬಂಧ ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಫ್ಲಿಪ್ಕಾರ್ಟ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.</p>.<p>‘ಜಿಲ್ಲೆಯ ಕಾಕೋಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ. 1ರಂದು ಹೊರಟಿದ್ದ ಲಾರಿಯ ಬಾಗಿಲಿನ ಬೀಗವನ್ನು ಸಿನಿಮೀಯ ರೀತಿಯಲ್ಲಿ ತೆರೆದು, ಮೊಬೈಲ್ಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳಿದ್ದ 6 ಬಾಕ್ಸ್ಗಳನ್ನು ಕಳವು ಮಾಡಲಾಗಿದೆ’ ಎಂದು ಲಾರಿ ಚಾಲಕ ಮಲಿಕಜಾನ್ ಮುಲ್ಲಾ ಅವರು ಠಾಣೆಗೆ ದೂರು ನೀಡಿದ್ದಾರೆ.</p>.<p>‘ಕಳವು ಬಗ್ಗೆ ಚಾಲಕ ದೂರು ನೀಡಿದ್ದು, ವಸ್ತುಗಳ ಬಗ್ಗೆ ಫ್ಲಿಪ್ಕಾರ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಯಾವ ವಸ್ತುಗಳು ಕಳುವಾಗಿವೆ? ಮೊಬೈಲ್ಗಳ ಐಎಂಇಐ ಸಂಖ್ಯೆ ಏನು ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಐಎಂಇಐ ಸಿಕ್ಕರೆ, ಮೊಬೈಲ್ಗಳ ಸುಳಿವು ಸಿಗುತ್ತದೆ’ ಎಂದು ಪೊಲೀಸರು ಹೇಳಿದರು.</p>.<p>‘ಸರಕು ಸಾಗಣೆ ವಾಹನಗಳಲ್ಲಿ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಲಾರಿಯಲ್ಲಿ ಅಳವಡಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ಲಾರಿ ನಿಂತಿತ್ತು. ಆದರೆ, ಕಾಕೋಳ ಬಳಿಯೇ ಬಾಗಿಲು ತೆರೆದಿರುವುದಾಗಿ ಕಂಪನಿಯ ತಾಂತ್ರಿಕ ವಿಭಾಗ ತಿಳಿಸಿದೆ. ಸತ್ಯಾಸತ್ಯತೆ ಪತ್ತೆಗೆ ತನಿಖೆ ನಡೆಸಿದ್ದೇವೆ’ ಎಂದರು.</p>