ಉತ್ಸವ ಮೂರ್ತಿ ಕಳಶ ಮೆರವಣಿಗೆ ಬ್ಯಾಡಗಿ: ಪಟ್ಟಣದ ಚಾವಡಿ ರಸ್ತೆಯ ಕಾಶಿರಾಮ ಹಾಗೂ ಮಾರುತಿ ದೇವಸ್ಥಾನಗಳ ಪುನರ್ ಪ್ರತಿಷ್ಠಾಪನೆ ನೂತನ ಗೋಪುರ ಹಾಗೂ 55 ಅಡಿ ಎತ್ತರದ ರಾಜಗೋಪುರಗಳ ಕಳಸಾರೋಹಣ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಪ್ರಯುಕ್ತ ಸೋಮವಾರ ಉತ್ಸವಮೂರ್ತಿಗಳ ಹಾಗೂ ಕಲಶಗಳ ಮೆರವಣೆಗೆ ಪಟ್ಟಣದಲ್ಲಿ ಶ್ರದ್ದಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ ಗಣಪತಿ ಪೂಜೆ ಪುಣ್ಯಾಹವಾಚನ ಮಾತೃಕಾ ಪೂಜೆ ದೇವನಾಂದಿ ಕುಲದೇವತಾ ಸ್ಥಾಪನೆ ಕೌತುಕ ಪೂಜೆ ಬ್ರಹ್ಮಕೂರ್ಚ ಹೋಮ ಮಹಾಗಣಪತಿ ಹೋಮ ನಡೆಯಿತು. ಬಳಿಕ ಚಂಡೆ ನಾದಶ್ವರ ಅಶಿಕ ಡೋಲ್ ವಾದ್ಯವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ರಾಕ್ಷೋಘ್ನ ಹೋಮ ವಾಸ್ತುಶಾಂತಿ ಬಲಿ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನ ಸಮಿತಿಸದಸ್ಯರು ಪಾಲ್ಗೊಂಡಿದ್ದರು.