‘ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದ ನನಗೆ ಪತ್ನಿಯೇ (ಪ್ರೇಮಕ್ಕ) ಸ್ಫೂರ್ತಿ ತುಂಬಿದಳು. ಈಗ ಸಾವಯವ ಕೃಷಿಯೊಂದಿಗೆ ಜೀವನ ಬೆಸೆದುಕೊಂಡಿದೆ. ನಾವು ಸಾವಯವ ಪದ್ಧತಿಯಲ್ಲೇ ಹೂಕೋಸು, ಗೋವಿನಜೋಳ, ಟೊಮೆಟೊ, ಎಲೆಕೋಸು, ಸೂರ್ಯಕಾಂತಿ ಬೆಳೆಯುತ್ತಿದ್ದೇವೆ. ಜೊತೆಗೆ ಅಡಿಕೆ, ವೀಳ್ಯದೆಲೆ, ಬದನೆಕಾಯಿ, ಚವಳಿಕಾಯಿ, ಕರಿಬೇವು, ಮೆಂತೆ, ಕೊತಂಬರಿ ಇತ್ಯಾದಿಗಳಿವೆ. ಅಡಿಕೆ–ತೆಂಗಿನಕಾಯಿಯೂ ಇದೆ. ಮನೆಯ ಕೈತೋಟದಲ್ಲಿ ಬೆಳೆದ ಕನಕಾಂಬರ ಗಿಡಗಳಿಂದ ಪ್ರತಿದಿನ ಅರ್ಧ ಕೆ.ಜಿ. ಹೂವನ್ನು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಚಂದ್ರಪ್ಪ ಆರೀಕಟ್ಟಿ.