<p><strong>ರಾಣೆಬೆನ್ನೂರು</strong>: ತಾಲ್ಲೂಕಿನಾದ್ಯಂತ ಹಿಂಗಾರು ಹಂಗಾಮಿಗೆ ಈ ವರ್ಷ 3,500 ಹೆಕ್ಟೇರ್ ಕಡಲೆ ಬೆಳೆ ಬಿತ್ತನೆಯಾಗಿದ್ದು, ಉತ್ತಮ ಇಳುವರಿ ಬಂದಿದೆ. ನಗರದ ಹಳೆ ಪಿ.ಬಿ. ರಸ್ತೆಯ ನೆಹರೂ ಮಾರುಕಟ್ಟೆಯ ಕಾಳು ಕಡಿ ಮಾರುಕಟ್ಟೆಯಲ್ಲಿ ಗುರುವಾರ 50 ಕೆ.ಜಿ ತೂಕದ 4,000 ಕ್ಕೂ ಹೆಚ್ಚು ಕಡಲೆ ಚೀಲಗಳ ಆವಕವಾಗಿದೆ.</p>.<p>ಗುರುವಾರದ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹ 5,440 ರಿಂದ ₹ 5,640 ದರಕ್ಕೆ ಕಡಲೆ ಮಾರಾಟವಾಗಿದೆ. 20 ದಿನಗಳ ಹಿಂದೆ ಕ್ವಿಂಟಲ್ಗೆ ₹ 6,000 ಸಾವಿರ ದರ ಇತ್ತು. ಪ್ರತಿ ಗುರುವಾರ ಮತ್ತು ಭಾನುವಾರ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಮಾರಾಟಕ್ಕೆ ತರುತ್ತಾರೆ ಎಂದು ಕಾಳು ಕಡಿ ವ್ಯಾಪಾರಸ್ಥ ಹಾಗೂ ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದರು.</p>.<p>ತಾಲ್ಲೂಕಿನ ಇಟಗಿ, ಮುಷ್ಟೂರ, ಮಣಕೂರ, ಅಂತರವಳ್ಳಿ, ಲಿಂಗದಹಳ್ಳಿ, ಜೋಯಿಸರ ಹರಳಹಳ್ಳಿ, ಹಲಗೇರಿ, ಬೆನಕನಕೊಂಡ, ಅಸುಂಡಿ, ಹುಲಿಹಳ್ಳಿ, ಯರೇಕುಪ್ಪಿ, ಉಕ್ಕುಂದ, ಸರ್ವಂದ, ತುಮ್ಮಿನಕಟ್ಟಿ, ಕುಪ್ಪೇಲೂರ, ಕೆರಿಮಲ್ಲಾಪುರ, ಕೂನಬೇವು, ಕಾಕೋಳ, ಮೈದೂರು, ಯತ್ತಿನಹಳ್ಳಿ ಗ್ರಾಮಗಳಲ್ಲಿ ಹೆಚ್ಚಾಗಿ ಕಡಲೆ ಬೆಳೆಯಲಾಗುತ್ತದೆ.</p>.<p>‘ಒಂದು ಎಕರೆಗೆ 20 ಕೆ.ಜಿಗಳಷ್ಟು ಬಿತ್ತನೆ ಬೀಜ ಬೇಕಾಗುತ್ತದೆ. ಆರ್ಎಸ್ಕೆ ಕೇಂದ್ರದಲ್ಲಿ ಖರೀದಿಸಿದರೆ 20 ಕೆ.ಜಿ ಬಿತ್ತನೆ ಬೀಜದ ಚೀಲಕ್ಕೆ (ಶೇ 25ರಷ್ಟು ಸಹಾಯಧನ) ₹ 1,450, ಹೊರಗಡೆ ಮಾರುಕಟ್ಟೆಯಲ್ಲಿ ₹ 1,500 ರಿಂದ 1,650 ದರ ಇದೆ. ಬಿತ್ತನೆ, ಕಾರ್ಮಿಕರು, ಗೊಬ್ಬರ ಬೀಜ, ಕ್ರಿಮಿನಾಶಕ ಸಿಂಪಡಣೆ ಎಲ್ಲ ಸೇರಿ ಒಂದು ಎಕರೆಗೆ ₹ 6 ಸಾವಿರ ಖರ್ಚು ಬರುತ್ತದೆ. ನಾನು ನಾಲ್ಕು ಎಕರೆ ಕಡಲೆ ಬಿತ್ತನೆ ಮಾಡಿದ್ದೇನೆ. ಎಕರೆಗೆ 4 ರಿಂದ 5 ಕ್ವಿಂಟಲ್ ಬೆಳೆ ಬಂದಿದೆ. ಈ ವರ್ಷ ಮಳೆ ಹದವರ್ತಿಯಾಗಿದ್ದರಿಂದ ಉತ್ತಮ ಇಳುವರಿ ಬಂದಿದ್ದು, ದರ ಕೂಡ ಚೆನ್ನಾಗಿದೆ’ ಎನ್ನುತ್ತಾರೆ ಅಂತರವಳ್ಳಿಯ ಯುವ ರೈತ ಗೋಪಿ ಜಡೇದ.</p>.<p>‘ಕರಿ ಮತ್ತು ಕಂದು ಬಣ್ಣದ ಕಡಲೆಯನ್ನು ಹೆಚ್ಚಾಗಿ ನಮ್ಮ ತಾಲ್ಲೂಕಿನಲ್ಲಿ ಬೆಳೆಯುತ್ತಾರೆ. ಕಡಲೆಯನ್ನು ಬೆಳೆಯಲು ಇಂಥದೇ ಮಣ್ಣು ಬೇಕೆಂಬುದೇನೂ ಇಲ್ಲ. ನೀರನ್ನು ಹಿಡಿದಿಡುವ ಎರೆ ಭೂಮಿಯಲ್ಲಿ ಹೆಚ್ಚು ಉತ್ಪನ್ನ ತೆಗೆಯಬಹುದು’ ಎನ್ನುತ್ತಾರೆ ಅಂತರವಳ್ಳಿ ಗ್ರಾಮದ ರೈತ ರಮೇಶ ಕಡ್ಲಿಗೊಂದಿ.</p>.<p>‘ಕಳೆ ತೆಗೆಯದಿದ್ದರೂ ತಾನೇ ಅದನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಎರಡು ಸಲ ಎಡೆ ಕುಂಟಿ ಹೊಡೆಯಲಾಗುವುದು. ಇದಕ್ಕೆ ಹೆಚ್ಚಿನ ಗೊಬ್ಬರ, ಕ್ರಿಮಿನಾಶಕದ ಅವಶ್ಯಕತೆ ಇಲ್ಲ. ಆದರೆ ರಂಜಕಯುಕ್ತ ಗೊಬ್ಬರ ಹಾಕುವುದರಿಂದ ಉತ್ತಮ ಬೆಳೆ ತೆಗೆಯಬಹುದು. ಕಡಲೆಯನ್ನು ಬೆಳೆದ ಮೇಲೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರ ಹೊಟ್ಟಂತೂ ದನಗಳಿಗೆ ಒಳ್ಳೆಯ ಮೇವು’ ಎನ್ನುತ್ತಾರೆ ಕೂನಬೇವು ಗ್ರಾಮದ ರೈತ ಚಂ.ಸು. ಪಾಟೀಲ.</p>.<p>‘ಕಡಲೆ ಬೀಜವು ಹೆಚ್ಚಿನ ಪೌಷ್ಟಿಕಾಂಶ ಮತ್ತು ಹಲವು ಆರೋಗ್ಯ ಪ್ರಯೋಜನ ಹೊಂದಿದೆ. ಇದು ಉತ್ತಮ ಪ್ರೋಟೀನ್ ಮೂಲವಾಗಿದ್ದು, ಫೈಬರ್ ಮತ್ತು ಇತರ ಅಗತ್ಯ ಜೀವಸತ್ವಗಳನ್ನು ಕೂಡ ನೀಡುವ ಬೆಳೆಯಾಗಿದೆ. ಸಲಾಡ್, ಸೂಪ್ನಿಂದ ಹಿಡಿದು ಕರಿ ತಯಾರಿಕೆಗೂ ಬಳಸಲಾಗುತ್ತದೆ’ ಹೊಟೇಲ್ ಮಾಲೀಕರ ಸಂಘದ ತಾಲ್ಲೂಕು ಘಟಕದ ನಿತ್ಯಾನಂದ ಕುಂದಾಪುರ ತಿಳಿಸಿದರು.</p>.<p>ತಾಲ್ಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಈ ಬಾರಿ ಕಡಲೆಯನ್ನು ಹೆಚ್ಚು ಬೆಳೆದಿದ್ದಾರೆ. ಚಳಿಗಾಲದ ಬೆಳೆಯಾದ್ದರಿಂದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡುತ್ತೇವೆ. ಮೂರು ತಿಂಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಕಪ್ಪು ಮಣ್ಣಿನ ಎರೆಭೂಮಿಯಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಇದಕ್ಕೆ ಭೂಮಿಯನ್ನು ಹೆಚ್ಚು ಹದಮಾಡುವುದು ಅಗತ್ಯ ಇಲ್ಲ. ಸುತ್ತಲೂ ಹಬ್ಬಿಕೊಂಡು ಬೆಳೆಯುವ ಗುಣಹೊಂದಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ತಾಲ್ಲೂಕಿನಾದ್ಯಂತ ಹಿಂಗಾರು ಹಂಗಾಮಿಗೆ ಈ ವರ್ಷ 3,500 ಹೆಕ್ಟೇರ್ ಕಡಲೆ ಬೆಳೆ ಬಿತ್ತನೆಯಾಗಿದ್ದು, ಉತ್ತಮ ಇಳುವರಿ ಬಂದಿದೆ. ನಗರದ ಹಳೆ ಪಿ.ಬಿ. ರಸ್ತೆಯ ನೆಹರೂ ಮಾರುಕಟ್ಟೆಯ ಕಾಳು ಕಡಿ ಮಾರುಕಟ್ಟೆಯಲ್ಲಿ ಗುರುವಾರ 50 ಕೆ.ಜಿ ತೂಕದ 4,000 ಕ್ಕೂ ಹೆಚ್ಚು ಕಡಲೆ ಚೀಲಗಳ ಆವಕವಾಗಿದೆ.</p>.<p>ಗುರುವಾರದ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹ 5,440 ರಿಂದ ₹ 5,640 ದರಕ್ಕೆ ಕಡಲೆ ಮಾರಾಟವಾಗಿದೆ. 20 ದಿನಗಳ ಹಿಂದೆ ಕ್ವಿಂಟಲ್ಗೆ ₹ 6,000 ಸಾವಿರ ದರ ಇತ್ತು. ಪ್ರತಿ ಗುರುವಾರ ಮತ್ತು ಭಾನುವಾರ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಮಾರಾಟಕ್ಕೆ ತರುತ್ತಾರೆ ಎಂದು ಕಾಳು ಕಡಿ ವ್ಯಾಪಾರಸ್ಥ ಹಾಗೂ ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದರು.</p>.<p>ತಾಲ್ಲೂಕಿನ ಇಟಗಿ, ಮುಷ್ಟೂರ, ಮಣಕೂರ, ಅಂತರವಳ್ಳಿ, ಲಿಂಗದಹಳ್ಳಿ, ಜೋಯಿಸರ ಹರಳಹಳ್ಳಿ, ಹಲಗೇರಿ, ಬೆನಕನಕೊಂಡ, ಅಸುಂಡಿ, ಹುಲಿಹಳ್ಳಿ, ಯರೇಕುಪ್ಪಿ, ಉಕ್ಕುಂದ, ಸರ್ವಂದ, ತುಮ್ಮಿನಕಟ್ಟಿ, ಕುಪ್ಪೇಲೂರ, ಕೆರಿಮಲ್ಲಾಪುರ, ಕೂನಬೇವು, ಕಾಕೋಳ, ಮೈದೂರು, ಯತ್ತಿನಹಳ್ಳಿ ಗ್ರಾಮಗಳಲ್ಲಿ ಹೆಚ್ಚಾಗಿ ಕಡಲೆ ಬೆಳೆಯಲಾಗುತ್ತದೆ.</p>.<p>‘ಒಂದು ಎಕರೆಗೆ 20 ಕೆ.ಜಿಗಳಷ್ಟು ಬಿತ್ತನೆ ಬೀಜ ಬೇಕಾಗುತ್ತದೆ. ಆರ್ಎಸ್ಕೆ ಕೇಂದ್ರದಲ್ಲಿ ಖರೀದಿಸಿದರೆ 20 ಕೆ.ಜಿ ಬಿತ್ತನೆ ಬೀಜದ ಚೀಲಕ್ಕೆ (ಶೇ 25ರಷ್ಟು ಸಹಾಯಧನ) ₹ 1,450, ಹೊರಗಡೆ ಮಾರುಕಟ್ಟೆಯಲ್ಲಿ ₹ 1,500 ರಿಂದ 1,650 ದರ ಇದೆ. ಬಿತ್ತನೆ, ಕಾರ್ಮಿಕರು, ಗೊಬ್ಬರ ಬೀಜ, ಕ್ರಿಮಿನಾಶಕ ಸಿಂಪಡಣೆ ಎಲ್ಲ ಸೇರಿ ಒಂದು ಎಕರೆಗೆ ₹ 6 ಸಾವಿರ ಖರ್ಚು ಬರುತ್ತದೆ. ನಾನು ನಾಲ್ಕು ಎಕರೆ ಕಡಲೆ ಬಿತ್ತನೆ ಮಾಡಿದ್ದೇನೆ. ಎಕರೆಗೆ 4 ರಿಂದ 5 ಕ್ವಿಂಟಲ್ ಬೆಳೆ ಬಂದಿದೆ. ಈ ವರ್ಷ ಮಳೆ ಹದವರ್ತಿಯಾಗಿದ್ದರಿಂದ ಉತ್ತಮ ಇಳುವರಿ ಬಂದಿದ್ದು, ದರ ಕೂಡ ಚೆನ್ನಾಗಿದೆ’ ಎನ್ನುತ್ತಾರೆ ಅಂತರವಳ್ಳಿಯ ಯುವ ರೈತ ಗೋಪಿ ಜಡೇದ.</p>.<p>‘ಕರಿ ಮತ್ತು ಕಂದು ಬಣ್ಣದ ಕಡಲೆಯನ್ನು ಹೆಚ್ಚಾಗಿ ನಮ್ಮ ತಾಲ್ಲೂಕಿನಲ್ಲಿ ಬೆಳೆಯುತ್ತಾರೆ. ಕಡಲೆಯನ್ನು ಬೆಳೆಯಲು ಇಂಥದೇ ಮಣ್ಣು ಬೇಕೆಂಬುದೇನೂ ಇಲ್ಲ. ನೀರನ್ನು ಹಿಡಿದಿಡುವ ಎರೆ ಭೂಮಿಯಲ್ಲಿ ಹೆಚ್ಚು ಉತ್ಪನ್ನ ತೆಗೆಯಬಹುದು’ ಎನ್ನುತ್ತಾರೆ ಅಂತರವಳ್ಳಿ ಗ್ರಾಮದ ರೈತ ರಮೇಶ ಕಡ್ಲಿಗೊಂದಿ.</p>.<p>‘ಕಳೆ ತೆಗೆಯದಿದ್ದರೂ ತಾನೇ ಅದನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಎರಡು ಸಲ ಎಡೆ ಕುಂಟಿ ಹೊಡೆಯಲಾಗುವುದು. ಇದಕ್ಕೆ ಹೆಚ್ಚಿನ ಗೊಬ್ಬರ, ಕ್ರಿಮಿನಾಶಕದ ಅವಶ್ಯಕತೆ ಇಲ್ಲ. ಆದರೆ ರಂಜಕಯುಕ್ತ ಗೊಬ್ಬರ ಹಾಕುವುದರಿಂದ ಉತ್ತಮ ಬೆಳೆ ತೆಗೆಯಬಹುದು. ಕಡಲೆಯನ್ನು ಬೆಳೆದ ಮೇಲೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರ ಹೊಟ್ಟಂತೂ ದನಗಳಿಗೆ ಒಳ್ಳೆಯ ಮೇವು’ ಎನ್ನುತ್ತಾರೆ ಕೂನಬೇವು ಗ್ರಾಮದ ರೈತ ಚಂ.ಸು. ಪಾಟೀಲ.</p>.<p>‘ಕಡಲೆ ಬೀಜವು ಹೆಚ್ಚಿನ ಪೌಷ್ಟಿಕಾಂಶ ಮತ್ತು ಹಲವು ಆರೋಗ್ಯ ಪ್ರಯೋಜನ ಹೊಂದಿದೆ. ಇದು ಉತ್ತಮ ಪ್ರೋಟೀನ್ ಮೂಲವಾಗಿದ್ದು, ಫೈಬರ್ ಮತ್ತು ಇತರ ಅಗತ್ಯ ಜೀವಸತ್ವಗಳನ್ನು ಕೂಡ ನೀಡುವ ಬೆಳೆಯಾಗಿದೆ. ಸಲಾಡ್, ಸೂಪ್ನಿಂದ ಹಿಡಿದು ಕರಿ ತಯಾರಿಕೆಗೂ ಬಳಸಲಾಗುತ್ತದೆ’ ಹೊಟೇಲ್ ಮಾಲೀಕರ ಸಂಘದ ತಾಲ್ಲೂಕು ಘಟಕದ ನಿತ್ಯಾನಂದ ಕುಂದಾಪುರ ತಿಳಿಸಿದರು.</p>.<p>ತಾಲ್ಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಈ ಬಾರಿ ಕಡಲೆಯನ್ನು ಹೆಚ್ಚು ಬೆಳೆದಿದ್ದಾರೆ. ಚಳಿಗಾಲದ ಬೆಳೆಯಾದ್ದರಿಂದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡುತ್ತೇವೆ. ಮೂರು ತಿಂಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಕಪ್ಪು ಮಣ್ಣಿನ ಎರೆಭೂಮಿಯಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಇದಕ್ಕೆ ಭೂಮಿಯನ್ನು ಹೆಚ್ಚು ಹದಮಾಡುವುದು ಅಗತ್ಯ ಇಲ್ಲ. ಸುತ್ತಲೂ ಹಬ್ಬಿಕೊಂಡು ಬೆಳೆಯುವ ಗುಣಹೊಂದಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>