ಹಾವೇರಿ: ನಗರದ ಉದಯನಗರದ ಹಾವೇರಿ ಜಿಲ್ಲಾ ಮಹಿಳಾ ಪತಂಜಲಿ ಯೋಗ ಕೇಂದ್ರದ ವತಿಯಿಂದ ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಿತು.
ಹಾವೇರಿ ತಾಲ್ಲೂಕು ಪ್ರಭಾರಿ ಪುಷ್ಪಾ ಮೃ. ಸೊಲಬಗೌಡ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಹಾವೇರಿಯ ಕೋವಿಡ್ ಕೇರ್ ಸೆಂಟರ್ನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಜ್ಯೋತಿ ಜಂಬಗಿ ಹಾಗೂ ರೇಖಾ ರಾಮಾಳದ ಅವರನ್ನು ಉದಯನಗರದ ಗಣೇಶ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.
ಉದಯನಗರದ ಯೋಗ ಶಿಕ್ಷಕಿ ಪುಷ್ಪಾ ಸೊಲಬಗೌಡ್ರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಅನುಪಮಾ ವಾಲಿಶೆಟ್ಟರ್, ದೀಪಾ ಹುಬ್ಬಳ್ಳಿ, ಪುಷ್ಪಾ ಎರೆಸೀಮಿ ಹಾಗೂ ಹಲವಾರು ಯೋಗ ಸಾಧಕರು ಭಾಗವಹಿಸಿದ್ದರು.