<p><strong>ಹಾನಗಲ್</strong>: ತಾಲ್ಲೂಕಿನ ಕರಗುದರಿ ಬಳಿ ಹೊಸದಾಗಿ ಸ್ಥಾಪನೆಯಾದ ಟೋಲ್ ಗೇಟ್ನಲ್ಲಿ ಸೋಮವಾರದಿಂದ ವಾಹನಗಳ ಶುಲ್ಕ ಸಂಗ್ರಹಣೆ ಶುರುವಾಗಿದ್ದು, ಹದಗೆಟ್ಟ ಹೆದ್ದಾರಿಗೆ ಸುಂಕವೇಕೆ ಎಂದು ಈ ರಸ್ತೆಯಲ್ಲಿ ಓಡಾಡುವವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p>.<p>ತಡಸ–ಶಿವಮೊಗ್ಗ ರಸ್ತೆಗೆ ಹಾನಗಲ್ ಹೊರಭಾಗದ ಕರಗುದರಿ ಕ್ರಾಸ್ ಬಳಿಯಲ್ಲಿ ಟೋಲ್ಗೇಟ್ ಸ್ಥಾಪಿಸುವ ಪ್ರಕ್ರಿಯೆಗಳ ಆರಂಭದಿಂದಲೂ ಜನರ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳಿಂದ ಹಲವಾರು ಬಾರಿ ಪ್ರತಿಭಟನೆ ನಡೆದಿದ್ದವು.</p>.<p>ಜನರ ವಿರೋಧದ ನಡುವೆಯೂ ಟೋಲ್ ಗೇಟ್ ಸ್ಥಾಪನೆಯಾಗಿ ಸುಂಕ ವಸೂಲಿ ನಡೆದಿರುವುದು ಈ ಭಾಗದ ಜನರಲ್ಲಿ ಅಸಮಾಧಾನ ಬುಗಿಲೇಳಲು ಕಾರಣವಾಗಿದೆ. ಮಂಗಳವಾರ ಟೋಲ್ ಗೇಟ್ ಸ್ಥಳದಲ್ಲಿ ಇಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಖಾಸಗಿ ವಾಹನ ಚಾಲಕರ ಸಂಘದವರು ಪ್ರತಿಭಟನೆ ನಡೆಸಿದರು.</p>.<p>ಸುಮಾರು 3 ಗಂಟೆ ಟೋಲ್ಗೇಟ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಓಡಾಡುವ ವಾಹನಗಳಿಗೆ ಶುಲ್ಕ ಪಡೆಯದಂತೆ ಟೋಲ್ ಸಿಬ್ಬಂದಿಗೆ ಪ್ರತಿಭಟನಾ ನಿರತರು ತಾಕೀತು ಮಾಡಿದರು. ಸ್ಥಳಕ್ಕೆ ಆಗಮಿಸಿದ ಕೆಆರ್ಡಿಸಿಎಲ್ ಅಧಿಕಾರಿ ದಯಾನಂದ ಅವರಿಗೆ ಮನವಿ ಸಲ್ಲಿಸಿದರು.</p>.<p>ಈ ಭಾಗದ ಜನರ ಪ್ರತಿಭಟನೆಯ ವಿಷಯವನ್ನು ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಅಧಿಕಾರಿ ದಯಾನಂದ ಹೇಳಿದರು.</p>.<p>ವಿವಿಧ ಸಂಘಟನೆಯ ಪ್ರಮುಖರಾದ ರಾಮನಗೌಡ ಪಾಟೀಲ, ರಾಮು ಯಳ್ಳೂರ, ಕುಮಾರ ಹತ್ತಿಕಾಳ, ಚಂದ್ರು ಮಲಗುಂದ, ಯಲ್ಲಪ್ಪ ಶೇರಖಾನೆ, ಸಿ.ಮಂಜುನಾಥ, ನಾಗರಾಜ ಪೂಜಾರ, ರವಿಕುಮಾರ ಎಚ್, ಹನುಮಂತಪ್ಪ ಕೋಣನಕೊಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್</strong>: ತಾಲ್ಲೂಕಿನ ಕರಗುದರಿ ಬಳಿ ಹೊಸದಾಗಿ ಸ್ಥಾಪನೆಯಾದ ಟೋಲ್ ಗೇಟ್ನಲ್ಲಿ ಸೋಮವಾರದಿಂದ ವಾಹನಗಳ ಶುಲ್ಕ ಸಂಗ್ರಹಣೆ ಶುರುವಾಗಿದ್ದು, ಹದಗೆಟ್ಟ ಹೆದ್ದಾರಿಗೆ ಸುಂಕವೇಕೆ ಎಂದು ಈ ರಸ್ತೆಯಲ್ಲಿ ಓಡಾಡುವವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.</p>.<p>ತಡಸ–ಶಿವಮೊಗ್ಗ ರಸ್ತೆಗೆ ಹಾನಗಲ್ ಹೊರಭಾಗದ ಕರಗುದರಿ ಕ್ರಾಸ್ ಬಳಿಯಲ್ಲಿ ಟೋಲ್ಗೇಟ್ ಸ್ಥಾಪಿಸುವ ಪ್ರಕ್ರಿಯೆಗಳ ಆರಂಭದಿಂದಲೂ ಜನರ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳಿಂದ ಹಲವಾರು ಬಾರಿ ಪ್ರತಿಭಟನೆ ನಡೆದಿದ್ದವು.</p>.<p>ಜನರ ವಿರೋಧದ ನಡುವೆಯೂ ಟೋಲ್ ಗೇಟ್ ಸ್ಥಾಪನೆಯಾಗಿ ಸುಂಕ ವಸೂಲಿ ನಡೆದಿರುವುದು ಈ ಭಾಗದ ಜನರಲ್ಲಿ ಅಸಮಾಧಾನ ಬುಗಿಲೇಳಲು ಕಾರಣವಾಗಿದೆ. ಮಂಗಳವಾರ ಟೋಲ್ ಗೇಟ್ ಸ್ಥಳದಲ್ಲಿ ಇಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಖಾಸಗಿ ವಾಹನ ಚಾಲಕರ ಸಂಘದವರು ಪ್ರತಿಭಟನೆ ನಡೆಸಿದರು.</p>.<p>ಸುಮಾರು 3 ಗಂಟೆ ಟೋಲ್ಗೇಟ್ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಓಡಾಡುವ ವಾಹನಗಳಿಗೆ ಶುಲ್ಕ ಪಡೆಯದಂತೆ ಟೋಲ್ ಸಿಬ್ಬಂದಿಗೆ ಪ್ರತಿಭಟನಾ ನಿರತರು ತಾಕೀತು ಮಾಡಿದರು. ಸ್ಥಳಕ್ಕೆ ಆಗಮಿಸಿದ ಕೆಆರ್ಡಿಸಿಎಲ್ ಅಧಿಕಾರಿ ದಯಾನಂದ ಅವರಿಗೆ ಮನವಿ ಸಲ್ಲಿಸಿದರು.</p>.<p>ಈ ಭಾಗದ ಜನರ ಪ್ರತಿಭಟನೆಯ ವಿಷಯವನ್ನು ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಅಧಿಕಾರಿ ದಯಾನಂದ ಹೇಳಿದರು.</p>.<p>ವಿವಿಧ ಸಂಘಟನೆಯ ಪ್ರಮುಖರಾದ ರಾಮನಗೌಡ ಪಾಟೀಲ, ರಾಮು ಯಳ್ಳೂರ, ಕುಮಾರ ಹತ್ತಿಕಾಳ, ಚಂದ್ರು ಮಲಗುಂದ, ಯಲ್ಲಪ್ಪ ಶೇರಖಾನೆ, ಸಿ.ಮಂಜುನಾಥ, ನಾಗರಾಜ ಪೂಜಾರ, ರವಿಕುಮಾರ ಎಚ್, ಹನುಮಂತಪ್ಪ ಕೋಣನಕೊಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>