ಈ ಕುರಿತು ಜಾಗೃತಿ ಮೂಡಿಸಲು ಸ್ಪರ್ಧೆಗಾಗಿ ಕಿರುಚಿತ್ರ ನಿರ್ಮಾಣ, ಯಶೋಗಾಥೆ (ಲೇಖನ) ಹಾಗೂ ಉತ್ತಮ ಮಾದರಿಗಳನ್ನು ಬಹುಮಾನಕ್ಕೆ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ₹15 ಸಾವಿರ, ₹10 ಸಾವಿರ ಹಾಗೂ ₹5 ಸಾವಿರವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ನೀಡಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಗೆ ನಾಮನಿರ್ದೇಶನ ಮಾಡಲಾಗುವುದು. ರಾಜ್ಯ ಮಟ್ಟದಲ್ಲಿ ಈ ಮೂರು ವಿಭಾಗಕ್ಕೆ ಕ್ರಮವಾಗಿ ₹50 ಸಾವಿರ, ₹40 ಸಾವಿರ ಹಾಗೂ ₹30 ಸಾವಿರ ಪುರಸ್ಕಾರದ ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.