<p><strong>ಹಾವೇರಿ</strong>: ಯುದ್ಧ ಪೀಡಿತ ಯುಎಇಯ ಅಬುಧಾಬಿಯಲ್ಲಿ ಹಾವೇರಿಯ ಎಂಜಿನಿಯರ್ ರಾಘವೇಂದ್ರ ಕುದರಿ ಅವರ ಕುಟುಂಬ ಸಿಲುಕಿದ್ದು, ತಾವು ವಾಸವಿದ್ದ ಮನೆಯನ್ನು ಬಿಟ್ಟು ಹೋಟೆಲ್ನಲ್ಲಿ ಆಶ್ರಯ ಪಡೆದಿದ್ದಾರೆ</p>.<p>ತಾಲ್ಲೂಕಿನ ಕನವಳ್ಳಿ ಗ್ರಾಮದ ರಾಘವೇಂದ್ರ ಕುದರಿ, ಉದ್ಯೋಗ ಅರಸಿ ಅಬುದಾಬಿಗೆ ಹೋಗಿದ್ದಾರೆ. ಅಲ್ಲಿಯ ಮೊಹಮ್ಮದ್ ಬಿನ್ ಜಾಯೆದ್ ನಗರದ ಅಪಾರ್ಟ್ಮೆಂಟ್ನಲ್ಲಿ ಪತ್ನಿ, ಮಕ್ಕಳ ಜೊತೆ ವಾಸವಿದ್ದಾರೆ.</p>.<p>ರಾಘವೇಂದ್ರ ವಾಸವಿದ್ದ ಮನೆ ಬಳಿಯೇ ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ರಾಘವೇಂದ್ರ ಅವರ ಮನೆಗೂ ಹಾನಿಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವರು ಮನೆ ತೊರೆದು ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಅಬುದಾಬಿಯಲ್ಲಿನ ಪರಿಸ್ಥಿತಿ ಬಗ್ಗೆ ವಿಡಿಯೊ ಚಿತ್ರೀಕರಿಸಿ ಸಂಬಂಧಿಕರಿಗೆ ಕಳುಹಿಸಿದ್ದಾರೆ. </p>.<p>‘ನಾವು ನೆಲೆಸಿದ್ದ ಸ್ಥಳದಿಂದ 15 ಕಿ.ಮೀ. ದೂರದಲ್ಲಿ ಅಮೆರಿಕ ಸೇನಾ ನೆಲೆಯಿದೆ. ಅದನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಯುತ್ತಿದೆ. ನಾವು ಸುರಕ್ಷಿತ ಎಂಬ ಭಾವನೆಯಿದೆ’ ಎಂದೂ ಹೇಳಿದ್ದಾರೆ.</p>.<p><strong>ಕುದರಿ ಕುಟುಂಬ ಸುರಕ್ಷಿತ</strong>: ‘ಕುದರಿ ಕುಟುಂಬದವರನ್ನು ಸಂಪರ್ಕಿಸಿದ್ದೇವೆ. ಅವರು ಊರಿಗೆ ಬರಲು ಸಿದ್ಧರಿದ್ದರೆ, ವ್ಯವಸ್ಥೆ ಮಾಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಯುದ್ಧ ಪೀಡಿತ ಯುಎಇಯ ಅಬುಧಾಬಿಯಲ್ಲಿ ಹಾವೇರಿಯ ಎಂಜಿನಿಯರ್ ರಾಘವೇಂದ್ರ ಕುದರಿ ಅವರ ಕುಟುಂಬ ಸಿಲುಕಿದ್ದು, ತಾವು ವಾಸವಿದ್ದ ಮನೆಯನ್ನು ಬಿಟ್ಟು ಹೋಟೆಲ್ನಲ್ಲಿ ಆಶ್ರಯ ಪಡೆದಿದ್ದಾರೆ</p>.<p>ತಾಲ್ಲೂಕಿನ ಕನವಳ್ಳಿ ಗ್ರಾಮದ ರಾಘವೇಂದ್ರ ಕುದರಿ, ಉದ್ಯೋಗ ಅರಸಿ ಅಬುದಾಬಿಗೆ ಹೋಗಿದ್ದಾರೆ. ಅಲ್ಲಿಯ ಮೊಹಮ್ಮದ್ ಬಿನ್ ಜಾಯೆದ್ ನಗರದ ಅಪಾರ್ಟ್ಮೆಂಟ್ನಲ್ಲಿ ಪತ್ನಿ, ಮಕ್ಕಳ ಜೊತೆ ವಾಸವಿದ್ದಾರೆ.</p>.<p>ರಾಘವೇಂದ್ರ ವಾಸವಿದ್ದ ಮನೆ ಬಳಿಯೇ ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ರಾಘವೇಂದ್ರ ಅವರ ಮನೆಗೂ ಹಾನಿಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವರು ಮನೆ ತೊರೆದು ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಅಬುದಾಬಿಯಲ್ಲಿನ ಪರಿಸ್ಥಿತಿ ಬಗ್ಗೆ ವಿಡಿಯೊ ಚಿತ್ರೀಕರಿಸಿ ಸಂಬಂಧಿಕರಿಗೆ ಕಳುಹಿಸಿದ್ದಾರೆ. </p>.<p>‘ನಾವು ನೆಲೆಸಿದ್ದ ಸ್ಥಳದಿಂದ 15 ಕಿ.ಮೀ. ದೂರದಲ್ಲಿ ಅಮೆರಿಕ ಸೇನಾ ನೆಲೆಯಿದೆ. ಅದನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಯುತ್ತಿದೆ. ನಾವು ಸುರಕ್ಷಿತ ಎಂಬ ಭಾವನೆಯಿದೆ’ ಎಂದೂ ಹೇಳಿದ್ದಾರೆ.</p>.<p><strong>ಕುದರಿ ಕುಟುಂಬ ಸುರಕ್ಷಿತ</strong>: ‘ಕುದರಿ ಕುಟುಂಬದವರನ್ನು ಸಂಪರ್ಕಿಸಿದ್ದೇವೆ. ಅವರು ಊರಿಗೆ ಬರಲು ಸಿದ್ಧರಿದ್ದರೆ, ವ್ಯವಸ್ಥೆ ಮಾಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>