<p><strong>ಹಾವೇರಿ:</strong> ತಾಲ್ಲೂಕಿನ ಹೊಸರಿತ್ತಿಯ ಗುರು ಗುದ್ದಲೀಸ್ವಾಮಿ ಮಠದ ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿಯವರ 126ನೇ ಯಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಕಡುಬಿನ ಕಾಳಗ ಸಂಭ್ರಮದಿಂದ ಜರುಗಿತು.</p>.<p>ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜೈಘೋಷಗಳ ನಡುವೆ ಕಾಳಗ ಅರ್ಥಪೂರ್ಣವಾಗಿ ನಡೆಯಿತು.</p>.<p>ಗುರು ಗುದ್ದಲೀಸ್ವಾಮಿ ಮಠದ ಪೀಠಾಧಿಪತಿಯಾದ ಸ್ವಾಮೀಜಿ, ತೆರೆದ ವಾಹನದಲ್ಲಿ ಕುಳಿತು ಭಕ್ತರ ಕಡೆ ಕಬ್ಬಿನ ತುಂಡುಗಳನ್ನು ಎರಚಿದರು. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ನೆರೆದಿದ್ದ ಭಕ್ತರು, ಕಬ್ಬಿನ ತುಂಡುಗಳನ್ನು ಹಿಡಿದುಕೊಳ್ಳಲು ಯತ್ನಿಸಿದರು. ಕೆಲವರಿಗೆ ಕಬ್ಬಿನ ತುಂಡುಗಳು ಸಿಕ್ಕವು.</p>.<p>‘ಸ್ವಾಮೀಜಿ ಅವರು ಎರಚುವ ಕಬ್ಬಿನ ತುಂಡುಗಳು ಸಿಕ್ಕರೆ ವರ್ಷಪೂರ್ತಿ ಒಳ್ಳೆಯದಾಗುತ್ತದೆ’ ಎಂಬ ಭಾವನೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಕಬ್ಬಿನ ತುಂಡುಗಳನ್ನು ಪಡೆಯಲು ಭಕ್ತರು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದ ದೃಶ್ಯಗಳು ಕಂಡುಬಂದವು.</p>.<p>ಕಬ್ಬಿನ ತುಂಡುಗಳು ಸಿಗುತ್ತಿದ್ದಂತೆ ಭಕ್ತರು, ‘ಹರಹರ ಮಹಾದೇವ’ ಎಂದು ಜೈಕಾರ ಕೂಗಿದರು. ಹೊಸರಿತ್ತಿ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.</p>.<p>ಕಡುಬಿನ ಕಾಳಗದ ನಂತರ ಸ್ವಾಮೀಜಿಯವರ ಸಿಂಹಾಸನಾರೋಹಣ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.</p>.<p><strong>ಜಾತ್ರಾ ಕಾರ್ಯಕ್ರಮ:</strong> ಜ. 5ರಂದು ಚಂದನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವಿದೆ. ಜ. 6 ಹಾಗೂ 7ರಂದು ಅಕ್ಕನ ಬಳಗದಿಂದ ವಿವಿಧ ಕಾರ್ಯಕ್ರಮಗಳಿವೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ತಾಲ್ಲೂಕಿನ ಹೊಸರಿತ್ತಿಯ ಗುರು ಗುದ್ದಲೀಸ್ವಾಮಿ ಮಠದ ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿಯವರ 126ನೇ ಯಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಕಡುಬಿನ ಕಾಳಗ ಸಂಭ್ರಮದಿಂದ ಜರುಗಿತು.</p>.<p>ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜೈಘೋಷಗಳ ನಡುವೆ ಕಾಳಗ ಅರ್ಥಪೂರ್ಣವಾಗಿ ನಡೆಯಿತು.</p>.<p>ಗುರು ಗುದ್ದಲೀಸ್ವಾಮಿ ಮಠದ ಪೀಠಾಧಿಪತಿಯಾದ ಸ್ವಾಮೀಜಿ, ತೆರೆದ ವಾಹನದಲ್ಲಿ ಕುಳಿತು ಭಕ್ತರ ಕಡೆ ಕಬ್ಬಿನ ತುಂಡುಗಳನ್ನು ಎರಚಿದರು. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ನೆರೆದಿದ್ದ ಭಕ್ತರು, ಕಬ್ಬಿನ ತುಂಡುಗಳನ್ನು ಹಿಡಿದುಕೊಳ್ಳಲು ಯತ್ನಿಸಿದರು. ಕೆಲವರಿಗೆ ಕಬ್ಬಿನ ತುಂಡುಗಳು ಸಿಕ್ಕವು.</p>.<p>‘ಸ್ವಾಮೀಜಿ ಅವರು ಎರಚುವ ಕಬ್ಬಿನ ತುಂಡುಗಳು ಸಿಕ್ಕರೆ ವರ್ಷಪೂರ್ತಿ ಒಳ್ಳೆಯದಾಗುತ್ತದೆ’ ಎಂಬ ಭಾವನೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಕಬ್ಬಿನ ತುಂಡುಗಳನ್ನು ಪಡೆಯಲು ಭಕ್ತರು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದ ದೃಶ್ಯಗಳು ಕಂಡುಬಂದವು.</p>.<p>ಕಬ್ಬಿನ ತುಂಡುಗಳು ಸಿಗುತ್ತಿದ್ದಂತೆ ಭಕ್ತರು, ‘ಹರಹರ ಮಹಾದೇವ’ ಎಂದು ಜೈಕಾರ ಕೂಗಿದರು. ಹೊಸರಿತ್ತಿ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.</p>.<p>ಕಡುಬಿನ ಕಾಳಗದ ನಂತರ ಸ್ವಾಮೀಜಿಯವರ ಸಿಂಹಾಸನಾರೋಹಣ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.</p>.<p><strong>ಜಾತ್ರಾ ಕಾರ್ಯಕ್ರಮ:</strong> ಜ. 5ರಂದು ಚಂದನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವಿದೆ. ಜ. 6 ಹಾಗೂ 7ರಂದು ಅಕ್ಕನ ಬಳಗದಿಂದ ವಿವಿಧ ಕಾರ್ಯಕ್ರಮಗಳಿವೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>