<p><strong>ಶಿಗ್ಗಾವಿ (ಹಾವೇರಿ ಜಿಲ್ಲೆ):</strong> ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶಿಗ್ಗಾವಿ, ಕುಂದಗೋಳ ಹಾಗೂ ಹಳಿಯಾಳದ ಕಲಾವಿದರ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನ ನಡೆಯಲಿದೆ.</p><p>ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಮಹಾರಾಷ್ಟ್ರ ರಾಜ್ಯದ ನಾಗಪುರದ ದಕ್ಷಿಣ ಮಧ್ಯ ಕ್ಷೇತ್ರದ ಸಾಂಸ್ಕೃತಿಕ ಕೇಂದ್ರದಿಂದ ಆಮಂತ್ರಣ ಪತ್ರ ಬಂದಿದೆ. </p><p>ಶಿಗ್ಗಾವಿ ಪಟ್ಟಣದ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆಯ ಕಲಾವಿದ ಶಂಕರ ಅರ್ಕಸಾಲಿ, ಸಹಾಯಕ ಕಲಾವಿದ ಶರಣ ಬಿಂದಲಗಿ, ದೊಡ್ಡಾಟದ ಪಾತ್ರಧಾರಿಗಳಿಗೆ ಪ್ರಸಾಧನ ವೇಷಭೂಷಣ ಸೇವೆ ಸಲ್ಲಿಸಲಿದ್ದಾರೆ.</p><p>ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಕಲಾವಿದರಾದ ಚಂದ್ರಶೇಖರಯ್ಯ ಗುರಯ್ಯನವರ ಕಲಾ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನವಾಗಲಿದೆ. ಅದರಲ್ಲಿ 10 ಪಾತ್ರಧಾರಿಗಳು, ಐವರು ಸಂಗೀತ ಕಲಾವಿದರು ಹಿನ್ನೆಲೆ ಸಂಗೀತ ನೀಡಲಿದ್ದಾರೆ.</p><p>ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ಜ.26ರಿಂದ 29ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದು ಗಂಟೆ ದೊಡ್ಡಾಟ ಪ್ರದರ್ಶನಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಳಿಯಾಳದ ತೊಗಲುಗೊಂಬೆ ಆಟದ ಕಲಾವಿದ ಸಿದ್ದು ಬಿರಾದಾರ ಅದರ ನೇತೃತ್ವ ವಹಿಸಿದ್ದಾರೆ.</p>.<div><blockquote>ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ನಮ್ಮೆಲ್ಲ ಕಲಾವಿದರ ಪುಣ್ಯ. 30 ವರ್ಷಗಳಿಂದ ಮಾಡಿದ ಕಲಾ ಸೇವೆ ಸಾರ್ಥಕ ಎನ್ನಿಸುತ್ತಿದೆ</blockquote><span class="attribution"> – ಶಂಕರ ಅರ್ಕಸಾಲಿ, ಕಲಾವಿದ, ಶಿಗ್ಗಾವಿ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ (ಹಾವೇರಿ ಜಿಲ್ಲೆ):</strong> ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶಿಗ್ಗಾವಿ, ಕುಂದಗೋಳ ಹಾಗೂ ಹಳಿಯಾಳದ ಕಲಾವಿದರ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನ ನಡೆಯಲಿದೆ.</p><p>ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಮಹಾರಾಷ್ಟ್ರ ರಾಜ್ಯದ ನಾಗಪುರದ ದಕ್ಷಿಣ ಮಧ್ಯ ಕ್ಷೇತ್ರದ ಸಾಂಸ್ಕೃತಿಕ ಕೇಂದ್ರದಿಂದ ಆಮಂತ್ರಣ ಪತ್ರ ಬಂದಿದೆ. </p><p>ಶಿಗ್ಗಾವಿ ಪಟ್ಟಣದ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆಯ ಕಲಾವಿದ ಶಂಕರ ಅರ್ಕಸಾಲಿ, ಸಹಾಯಕ ಕಲಾವಿದ ಶರಣ ಬಿಂದಲಗಿ, ದೊಡ್ಡಾಟದ ಪಾತ್ರಧಾರಿಗಳಿಗೆ ಪ್ರಸಾಧನ ವೇಷಭೂಷಣ ಸೇವೆ ಸಲ್ಲಿಸಲಿದ್ದಾರೆ.</p><p>ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಕಲಾವಿದರಾದ ಚಂದ್ರಶೇಖರಯ್ಯ ಗುರಯ್ಯನವರ ಕಲಾ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನವಾಗಲಿದೆ. ಅದರಲ್ಲಿ 10 ಪಾತ್ರಧಾರಿಗಳು, ಐವರು ಸಂಗೀತ ಕಲಾವಿದರು ಹಿನ್ನೆಲೆ ಸಂಗೀತ ನೀಡಲಿದ್ದಾರೆ.</p><p>ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ಜ.26ರಿಂದ 29ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದು ಗಂಟೆ ದೊಡ್ಡಾಟ ಪ್ರದರ್ಶನಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಳಿಯಾಳದ ತೊಗಲುಗೊಂಬೆ ಆಟದ ಕಲಾವಿದ ಸಿದ್ದು ಬಿರಾದಾರ ಅದರ ನೇತೃತ್ವ ವಹಿಸಿದ್ದಾರೆ.</p>.<div><blockquote>ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ನಮ್ಮೆಲ್ಲ ಕಲಾವಿದರ ಪುಣ್ಯ. 30 ವರ್ಷಗಳಿಂದ ಮಾಡಿದ ಕಲಾ ಸೇವೆ ಸಾರ್ಥಕ ಎನ್ನಿಸುತ್ತಿದೆ</blockquote><span class="attribution"> – ಶಂಕರ ಅರ್ಕಸಾಲಿ, ಕಲಾವಿದ, ಶಿಗ್ಗಾವಿ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>