ಹಾವೇರಿ: ನಗರದ ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ಅಶ್ವಿನಿ ವೈನ್ ಸೆಂಟರ್ನಲ್ಲಿ ಕಳ್ಳತನ ಮಾಡಿರುವ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.
ಮದ್ಯದಂಗಡಿಯ ಬಾಗಿಲು ಮುರಿದು, ಗೋಡೆ ಕೊರೆದು ಮದ್ಯವನ್ನು ಕಳವು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸನ್ನದುದಾರ ಎಸ್.ಕೆ. ಮೆಣಸಿನಹಾಳ ಅವರಿಗೆ ಸೇರಿದ ಈ ಮಳಿಗೆಯನ್ನು ಬಸವರಾಜ ಬೆಳವಡಿ ಅವರು ನಡೆಸುತ್ತಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಕ್ಡೌನ್ ಆದ ಮೇಲೆ ಎಲ್ಲೆಡೆ ಮದ್ಯದಂಗಡಿಯಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಗರದ ಹಳೆಯ ಪಿ.ಬಿ.ರಸ್ತೆಯ ವೆಂಕಟೇಶ್ವರ ವೈನ್ ಸೆಂಟರ್ನಲ್ಲಿ ಕಳ್ಳತನ ಪ್ರಕರಣ ನಡೆದಿತ್ತು.