‘ಹಸೀನಾ ಮೂಲಿಮನಿ ಎಂಬ ಮಹಿಳೆ ಮಲ್ಲಿಕಾರ್ಜುನ ಅವರಿಗೆ ನಿತ್ಯ ಫೋನ್ ಮಾಡಿ, ಮೆಸೇಜ್ ಮಾಡಿ, ಫೋಟೊಗಳನ್ನು ಕಳುಹಿಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಳು. ವಕೀಲರಾದ ಜಿ.ವಿ.ಕುಲಕರ್ಣಿ, ಕೆ.ಬಿ.ಕುರಿಯವರು, ವಾಸೀಮ್ ಎಂಬ ಆರೋಪಿಗಳು ನ್ಯಾಯಾಲಯದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಭಾನುವಾರ ನೇಣಿಗೆ ಶರಣಾಗಿದ್ದಾರೆ’ ಎಂದು ಮೃತರ ಪತ್ನಿ ಭಾರತಿ ಅವರು ದೂರಿನಲ್ಲಿ ತಿಳಿಸಿದ್ದಾರೆ.