<p><strong>ಗುತ್ತಲ</strong>: ಇಲ್ಲಿನ ತುಂಗಭದ್ರಾ ನದಿ ತಟದಲ್ಲಿರುವ ಹರಳಹಳ್ಳಿ ಗ್ರಾಮವು ಕ್ರಿ.ಶ.12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಳ್ವಿಕೆಗೆ ಒಳಪಟ್ಟ ವಿಕ್ರಮಪುರ ಎಂದು ಶಾಸನಗಳಲ್ಲಿ ಉಲ್ಲೇಖವಿದೆ.</p>.<p>ವಿಕ್ರಮಾದಿತ್ಯನ ಮಗಳಾದ ತುಳುವಲದೇವಿಯ ನೆನಪಿಗೊಸ್ಕರ ತುಳುವಲೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಇಲ್ಲಿರುವ ಕ್ರಿ.ಶ. 1188ರ ಶಾಸನದಲ್ಲಿ ಉಲ್ಲೇಖವಿದೆ.</p>.<p>ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡ ತ್ರಿಕೂಟಾಲವಿರುವ ಈಶ್ವರ ದೇವಾಲಯವೂ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಇದೆ.</p>.<p>ಹರಳಹಳ್ಳಿ ಗ್ರಾಮದಲ್ಲಿ 5 ಶಾಸನಗಳಿವೆ. ಗ್ರಾಮವು 1,011 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಪೈಕಿ 697 ಹೆಕ್ಟೇರ್ ಕೃಷಿ ಭೂಮಿ ಇದೆ. ಇಲ್ಲಿನ ಸೋಮೇಶ್ವರ ದೇವಸ್ಥಾನದ ಆಸುಪಾಸು ಸ್ಥಳವೆಲ್ಲ 1992ರ ನೆರೆಹಾವಳಿಯಿಂದ ಮುಳುಗಿತ್ತು. ಬಳಿಕ ಸರ್ಕಾರವು ಗ್ರಾಮವನ್ನು ನದಿಯ ದಡದಿಂದ 1 ಕಿ.ಮೀ.ದೂರಕ್ಕೆ ಸ್ಥಳಾಂತರಿಸಿತ್ತು. ನದಿಯ ದಡದಲ್ಲಿ ಕೇಂದ್ರೀಯ ಜಲ ಆಯೋಗದ ಕೇಂದ್ರ ಸಹ ಇದೆ.</p>.<p>ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕೆಂಪು, ಯರಿ ಮಣ್ಣು ಮತ್ತು ಕಲ್ಲುಮಿಶ್ರಿತ ಕೆಂಪು ಮಣ್ಣು ಹೊಂದಿದೆ. ಭತ್ತ, ಕಬ್ಬು, ಬಾಳೆ, ಅಡಿಕೆ, ಗೊವಿನಜೋಳ ಗ್ರಾಮದ ಪ್ರಮುಖ ಬೆಳೆಗಳಾಗಿವೆ.</p>.<p>ಇಲ್ಲಿ ಪ್ರತಿವರ್ಷ ದುರ್ಗಾದೇವಿ ಜಾತ್ರೆ ನಡೆಯುತ್ತದೆ. ಜೈನಲಿಂಗೇಶ್ವರ, ಕೋಡಿಹನಮಪ್ಪ, ಉಡಚಮ್ಮ, ಕೆರೆಹನಮಪ್ಪ, ಕುಮಾರೇಶ್ವರ ದೇವಸ್ಥಾನ, ನಾಲ್ಕು ಮುಖವುಳ್ಳ ಬ್ರಹ್ಮದೇವರುಗಳು ಗ್ರಾಮದ ಪ್ರಮುಖ ಆಕರ್ಷಣೆ ಆಗಿದೆ.</p>.<div><blockquote>ಕಲ್ಯಾಣ ಚಾಲುಕ್ಯ ಅರಸರು ಇಲ್ಲಿನ ಗುಡ್ಡಹಾಳಪಳ್ಳಿ ದತ್ತು ನೀಡಿದ್ದು ಅದು ಕ್ರಮೇಣ ಹಾಳಪಳ್ಳಿ ಎಂದಾಯಿತು. ಹಾಳಪಳ್ಳಿ ಹೋಗಿ ಹರಳಹಳ್ಳಿ ಎಂದು ಕರೆಯಲ್ಪಟ್ಟಿದೆ ಎಂದು ಗ್ರಾಮ ಚರಿತ್ರೆ ಕೋಶದಲ್ಲಿ ಉಲ್ಲೇಖವಾಗಿದೆ.</blockquote><span class="attribution"> ಲಿಂಗನಗೌಡ ಹೋಸಗೌಡ್ರ, ಗ್ರಾಮದ ಹಿರಿಯರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ</strong>: ಇಲ್ಲಿನ ತುಂಗಭದ್ರಾ ನದಿ ತಟದಲ್ಲಿರುವ ಹರಳಹಳ್ಳಿ ಗ್ರಾಮವು ಕ್ರಿ.ಶ.12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಆಳ್ವಿಕೆಗೆ ಒಳಪಟ್ಟ ವಿಕ್ರಮಪುರ ಎಂದು ಶಾಸನಗಳಲ್ಲಿ ಉಲ್ಲೇಖವಿದೆ.</p>.<p>ವಿಕ್ರಮಾದಿತ್ಯನ ಮಗಳಾದ ತುಳುವಲದೇವಿಯ ನೆನಪಿಗೊಸ್ಕರ ತುಳುವಲೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಇಲ್ಲಿರುವ ಕ್ರಿ.ಶ. 1188ರ ಶಾಸನದಲ್ಲಿ ಉಲ್ಲೇಖವಿದೆ.</p>.<p>ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡ ತ್ರಿಕೂಟಾಲವಿರುವ ಈಶ್ವರ ದೇವಾಲಯವೂ ಗ್ರಾಮದಲ್ಲಿ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಇದೆ.</p>.<p>ಹರಳಹಳ್ಳಿ ಗ್ರಾಮದಲ್ಲಿ 5 ಶಾಸನಗಳಿವೆ. ಗ್ರಾಮವು 1,011 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಪೈಕಿ 697 ಹೆಕ್ಟೇರ್ ಕೃಷಿ ಭೂಮಿ ಇದೆ. ಇಲ್ಲಿನ ಸೋಮೇಶ್ವರ ದೇವಸ್ಥಾನದ ಆಸುಪಾಸು ಸ್ಥಳವೆಲ್ಲ 1992ರ ನೆರೆಹಾವಳಿಯಿಂದ ಮುಳುಗಿತ್ತು. ಬಳಿಕ ಸರ್ಕಾರವು ಗ್ರಾಮವನ್ನು ನದಿಯ ದಡದಿಂದ 1 ಕಿ.ಮೀ.ದೂರಕ್ಕೆ ಸ್ಥಳಾಂತರಿಸಿತ್ತು. ನದಿಯ ದಡದಲ್ಲಿ ಕೇಂದ್ರೀಯ ಜಲ ಆಯೋಗದ ಕೇಂದ್ರ ಸಹ ಇದೆ.</p>.<p>ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕೆಂಪು, ಯರಿ ಮಣ್ಣು ಮತ್ತು ಕಲ್ಲುಮಿಶ್ರಿತ ಕೆಂಪು ಮಣ್ಣು ಹೊಂದಿದೆ. ಭತ್ತ, ಕಬ್ಬು, ಬಾಳೆ, ಅಡಿಕೆ, ಗೊವಿನಜೋಳ ಗ್ರಾಮದ ಪ್ರಮುಖ ಬೆಳೆಗಳಾಗಿವೆ.</p>.<p>ಇಲ್ಲಿ ಪ್ರತಿವರ್ಷ ದುರ್ಗಾದೇವಿ ಜಾತ್ರೆ ನಡೆಯುತ್ತದೆ. ಜೈನಲಿಂಗೇಶ್ವರ, ಕೋಡಿಹನಮಪ್ಪ, ಉಡಚಮ್ಮ, ಕೆರೆಹನಮಪ್ಪ, ಕುಮಾರೇಶ್ವರ ದೇವಸ್ಥಾನ, ನಾಲ್ಕು ಮುಖವುಳ್ಳ ಬ್ರಹ್ಮದೇವರುಗಳು ಗ್ರಾಮದ ಪ್ರಮುಖ ಆಕರ್ಷಣೆ ಆಗಿದೆ.</p>.<div><blockquote>ಕಲ್ಯಾಣ ಚಾಲುಕ್ಯ ಅರಸರು ಇಲ್ಲಿನ ಗುಡ್ಡಹಾಳಪಳ್ಳಿ ದತ್ತು ನೀಡಿದ್ದು ಅದು ಕ್ರಮೇಣ ಹಾಳಪಳ್ಳಿ ಎಂದಾಯಿತು. ಹಾಳಪಳ್ಳಿ ಹೋಗಿ ಹರಳಹಳ್ಳಿ ಎಂದು ಕರೆಯಲ್ಪಟ್ಟಿದೆ ಎಂದು ಗ್ರಾಮ ಚರಿತ್ರೆ ಕೋಶದಲ್ಲಿ ಉಲ್ಲೇಖವಾಗಿದೆ.</blockquote><span class="attribution"> ಲಿಂಗನಗೌಡ ಹೋಸಗೌಡ್ರ, ಗ್ರಾಮದ ಹಿರಿಯರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>