‘ಹಾನಗಲ್ ತಾಲ್ಲೂಕು ಆರೋಗ್ಯಾಧಿಕಾರಿಗೆ ಕರೆ ಮಾಡಿದರೆ, ‘ಹಾವೇರಿಯಿಂದ ಆ್ಯಂಬುಲೆನ್ಸ್ ಬರಬೇಕು. ಬಹುಶಃ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿಯಿಲ್ಲದ ಕಾರಣ, ಆ್ಯಂಬುಲೆನ್ಸ್ ಬರುವುದು ತಡವಾಗಿರಬಹುದು’ ಎಂದು ಉತ್ತರ ಕೊಟ್ಟರು. ವಯಸ್ಸಾದ ಸೋಂಕಿತರನ್ನು ಕರೆದೊಯ್ಯಲು ಈ ರೀತಿ ನಿರ್ಲಕ್ಷ್ಯ ಮಾಡಿದರೆ, ಉಸಿರಾಟದ ಸಮಸ್ಯೆಯಾಗಿ ಜೀವಕ್ಕೆ ತೊಂದರೆಯಾದರೆ ಯಾರು ಗತಿ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಕ್ರಮ ಕೈಗೊಳ್ಳಲಿ’ ಎಂದು ಮನವಿ ಮಾಡಿದ್ದಾರೆ.