<p><strong>ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): </strong>ಲಂಡನ್ನಲ್ಲಿ ನೆಲೆಸಿರುವ ಹದಿನೈದು ಜನ ಭಾರತೀಯರ ತಂಡವೊಂದು ‘ಇಂಡಿಯನ್ಸ್ ಇನ್ ಲಂಡನ್‘ ಗ್ರೂಪ್ ನೆರವಿನೊಂದಿಗೆ ‘ರೈಡ್ 2 ಬ್ರೀತ್’ ಅಭಿಯಾನದ ಮೂಲಕ ತಾಯ್ನಾಡಿನ ಕೊರೊನಾ ಸೋಂಕಿತರ ನೆರವಿಗೆ ನಿಂತಿದೆ. 123 ಕಿ.ಮೀ ಸೈಕ್ಲಿಂಗ್ ಮಾಡಿ, ಸಾಮಾಜಿಕ ಜಾಲತಾಣಗಳ ಮುಖಾಂತರ ಹಣ ಸಂಗ್ರಹ ಮಾಡಿದೆ.</p>.<p>ಲಂಡನ್ನ ಸಿಸ್ಕೊ ಕಂಪನಿಯ ವ್ಯವಸ್ಥಾಪಕ ಹಾಗೂ ‘ರೈಡ್ 2 ಬ್ರೀತ್’ ಅಭಿಯಾನದ ಸಂಚಾಲಕ, ಮೂಲತಃ ಅಹಮದಾಬಾದ್ನ ಜಿಗ್ನೇಶ್ ಪಟೇಲ್ ಮತ್ತು ನೊಯಿಡಾ ಮೂಲದ ಟೆಕಿ ನಿಮೀತ್ ಸಿಸೋಡಿಯಾ123 ಕಿ.ಮೀ ದಾರಿಯನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿ ಅಲ್ಲಿನ ಭಾರತೀಯರಿಗೆ ತಮ್ಮ ಯೋಜನೆ ಬಗ್ಗೆ ತಿಳಿಸಿ, ಅವರಿಂದ ಧನ ಸಹಾಯ ಪಡೆದಿದ್ದಾರೆ. ಈ ಅಭಿಯಾನದಿಂದ ₹10 ಲಕ್ಷ ಹಣ ಸಂಗ್ರಹವಾಗಿದೆ.</p>.<p>‘ಇಂಡಿಯನ್ಸ್ ಇನ್ ಲಂಡನ್‘ ಗ್ರೂಪ್ನ ಸಂಸ್ಥಾಪಕಿ, ಸಮಾಜ ಸೇವಕಿ ಮುಂಬೈ ಮೂಲದ ಮೀನಲ್ ಜೈಸ್ವಾಲ್ ಅವರ ಸಹಾಯದಿಂದ ಭಾರತಕ್ಕೆ ಕಳುಹಿಸಿದ ತಲಾ ₹70 ಸಾವಿರ ಮೌಲ್ಯದ ಒಟ್ಟು 50 ಆಮ್ಲಜನಕ ಸಾಂದ್ರಕಗಳನ್ನು ಗುಜರಾತ್, ರಾಜಸ್ತಾನ, ಪಂಜಾಬ್, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಿಗೆ ಸಾಂದ್ರಕಗಳನ್ನು ಪೂರೈಸಲಾಗಿದೆ.</p>.<p>‘ರೈಡ್ 2 ಬ್ರೀತ್’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ರಟ್ಟಿಹಳ್ಳಿ ಮೂಲದ ಲಂಡನ್ನಲ್ಲಿ ಎಂಎಸ್ ಓದುತ್ತಿರುವ ಎಂಜಿನಿಯರ್ ಮಧುಕರ ಕುಲಕರ್ಣಿ ಇಲ್ಲಿನ ಎನ್ಜಿಒಗೆ ಈ ಮಾಹಿತಿ ನೀಡಿದ್ದರು.</p>.<p>ರಟ್ಟೀಹಳ್ಳಿಯಲ್ಲಿರುವ ವಿಕಾಸ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಶೀಲ್ ನಾಡಗೇರ ಅವರು ಬೆಂಗಳೂರಿನಲ್ಲಿ 3, ಗದಗ ಸಮೀಪದ ಬಿಂಚಲಿಯಲ್ಲಿ 1, ಹಾವೇರಿಯ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ 2 ಆಮ್ಲಜನಕ ಸಾಂದ್ರಕಗಳನ್ನು ವಿತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): </strong>ಲಂಡನ್ನಲ್ಲಿ ನೆಲೆಸಿರುವ ಹದಿನೈದು ಜನ ಭಾರತೀಯರ ತಂಡವೊಂದು ‘ಇಂಡಿಯನ್ಸ್ ಇನ್ ಲಂಡನ್‘ ಗ್ರೂಪ್ ನೆರವಿನೊಂದಿಗೆ ‘ರೈಡ್ 2 ಬ್ರೀತ್’ ಅಭಿಯಾನದ ಮೂಲಕ ತಾಯ್ನಾಡಿನ ಕೊರೊನಾ ಸೋಂಕಿತರ ನೆರವಿಗೆ ನಿಂತಿದೆ. 123 ಕಿ.ಮೀ ಸೈಕ್ಲಿಂಗ್ ಮಾಡಿ, ಸಾಮಾಜಿಕ ಜಾಲತಾಣಗಳ ಮುಖಾಂತರ ಹಣ ಸಂಗ್ರಹ ಮಾಡಿದೆ.</p>.<p>ಲಂಡನ್ನ ಸಿಸ್ಕೊ ಕಂಪನಿಯ ವ್ಯವಸ್ಥಾಪಕ ಹಾಗೂ ‘ರೈಡ್ 2 ಬ್ರೀತ್’ ಅಭಿಯಾನದ ಸಂಚಾಲಕ, ಮೂಲತಃ ಅಹಮದಾಬಾದ್ನ ಜಿಗ್ನೇಶ್ ಪಟೇಲ್ ಮತ್ತು ನೊಯಿಡಾ ಮೂಲದ ಟೆಕಿ ನಿಮೀತ್ ಸಿಸೋಡಿಯಾ123 ಕಿ.ಮೀ ದಾರಿಯನ್ನು ಸೈಕ್ಲಿಂಗ್ ಮೂಲಕ ಕ್ರಮಿಸಿ ಅಲ್ಲಿನ ಭಾರತೀಯರಿಗೆ ತಮ್ಮ ಯೋಜನೆ ಬಗ್ಗೆ ತಿಳಿಸಿ, ಅವರಿಂದ ಧನ ಸಹಾಯ ಪಡೆದಿದ್ದಾರೆ. ಈ ಅಭಿಯಾನದಿಂದ ₹10 ಲಕ್ಷ ಹಣ ಸಂಗ್ರಹವಾಗಿದೆ.</p>.<p>‘ಇಂಡಿಯನ್ಸ್ ಇನ್ ಲಂಡನ್‘ ಗ್ರೂಪ್ನ ಸಂಸ್ಥಾಪಕಿ, ಸಮಾಜ ಸೇವಕಿ ಮುಂಬೈ ಮೂಲದ ಮೀನಲ್ ಜೈಸ್ವಾಲ್ ಅವರ ಸಹಾಯದಿಂದ ಭಾರತಕ್ಕೆ ಕಳುಹಿಸಿದ ತಲಾ ₹70 ಸಾವಿರ ಮೌಲ್ಯದ ಒಟ್ಟು 50 ಆಮ್ಲಜನಕ ಸಾಂದ್ರಕಗಳನ್ನು ಗುಜರಾತ್, ರಾಜಸ್ತಾನ, ಪಂಜಾಬ್, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಿಗೆ ಸಾಂದ್ರಕಗಳನ್ನು ಪೂರೈಸಲಾಗಿದೆ.</p>.<p>‘ರೈಡ್ 2 ಬ್ರೀತ್’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ರಟ್ಟಿಹಳ್ಳಿ ಮೂಲದ ಲಂಡನ್ನಲ್ಲಿ ಎಂಎಸ್ ಓದುತ್ತಿರುವ ಎಂಜಿನಿಯರ್ ಮಧುಕರ ಕುಲಕರ್ಣಿ ಇಲ್ಲಿನ ಎನ್ಜಿಒಗೆ ಈ ಮಾಹಿತಿ ನೀಡಿದ್ದರು.</p>.<p>ರಟ್ಟೀಹಳ್ಳಿಯಲ್ಲಿರುವ ವಿಕಾಸ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಶೀಲ್ ನಾಡಗೇರ ಅವರು ಬೆಂಗಳೂರಿನಲ್ಲಿ 3, ಗದಗ ಸಮೀಪದ ಬಿಂಚಲಿಯಲ್ಲಿ 1, ಹಾವೇರಿಯ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ 2 ಆಮ್ಲಜನಕ ಸಾಂದ್ರಕಗಳನ್ನು ವಿತರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>