ಏನಿದು ಪ್ರಕರಣ:
ಹಾವೇರಿ ತಾಲ್ಲೂಕು ಪಂಚಾಯಿತಿಯಿಂದ ಸಾಮಗ್ರಿ ಪೂರೈಕೆಗಾಗಿ ಕರೆದ ಟೆಂಡರ್ನಲ್ಲಿ ಶರಣಪ್ಪ ಅವರು ‘ಈ ಟೆಂಡರ್ ನನಗೇ ಸಿಗುವಂತೆ ಮಾಡಿದ್ದಲ್ಲಿ ಟೆಂಡರ್ ಮೊತ್ತದ ಶೇ 20ರಷ್ಟು ಹಣವನ್ನು ನಿಮಗೆ ಕೊಡುತ್ತೇನೆ ಎಂದು ಒತ್ತಾಯಿಸಿ, ಲಂಚ ತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ್ದರು’ ಎಂದು ಇಒ ಭರತ್ ಹೆಗಡೆ ಲೋಕಾಯುಕ್ತರಿಗೆ ದೂರು ನೀಡಿದ್ದರು.
₹2 ಲಕ್ಷವನ್ನು ಮುಂಗಡವಾಗಿ ನೀಡಲು ಭರವಸೆ ನೀಡಿ, ನಗರದ ಖಾಸಗಿ ಹೋಟೆಲ್ನಲ್ಲಿ ₹90 ಸಾವಿರ ಲಂಚ ಕೊಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
‘ಸರ್ಕಾರಿ ಅಧಿಕಾರಿ ಲಂಚ ಮುಟ್ಟದೆ, ಲಂಚ ಕೊಡುವವನನ್ನೇ ಹಿಡಿದುಕೊಟ್ಟಿದ್ದು, ಲೋಕಾಯುಕ್ತ ಪ್ರಕರಣಗಳಲ್ಲಿಯೇ ವಿರಳ ಘಟನೆ ಎನಿಸಿದೆ. ಇದನ್ನು ‘ರಿವರ್ಸ್ ಟ್ರ್ಯಾಪ್’ ಎನ್ನುತ್ತೇವೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ತಿಳಿಸಿದರು.